ಸುದ್ದಿ ಪ್ರತಿನಿಧಿ ಏಜೆಂಟರುಗಳ ಸಭೆ

0

ಸುಳ್ಯ ಸುದ್ದಿಬಿಡುಗಡೆ ಪತ್ರಿಕೆ, ವೆಬ್ ಸೈಟ್ ಹಾಗೂ ಚಾನಲ್, ಪ್ರತಿನಿಧಿಗಳು ಮತ್ತು ಏಜೆಂಟರುಗಳ ಸಭೆಯು ಸುಳ್ಯದ ಶ್ರೀಹರಿ ಕಾಂಪ್ಲೆಕ್ಸ್ ನಲ್ಲಿರುವ ರಂಗಮಯೂರಿ ಕಲಾ ಶಾಲೆಯಲ್ಲಿ ಆ.5ರಂದು ಜರುಗಿತು.


ಸುದ್ದಿ ಸಮೂಹ ಮಾಧ್ಯಮ ಸಂಸ್ಥೆಯ ಆಡಳಿತ ನಿರ್ದೇಶಕರಾದ ಡಾ. ಯು.ಪಿ. ಶಿವಾನಂದ ಅವರು ಅಧ್ಯಕ್ಷತೆ ವಹಿಸಿದ್ದರು.


ಸುದ್ದಿ ಪತ್ರಿಕೆಯ ಆರಂಭದ ದಿನಗಳಿಂದಲೂ ಏಜೆಂಟರಾಗಿರುವ ದಾಮೋದರ ಪಾಟಾಳಿ ಮಿತ್ತಡ್ಕ, ಎಂ.ಎಸ್. ಭಟ್ ಬೆನಕ ಜಾಲ್ಸೂರು, ಸುದ್ದಿ ಪತ್ರಿಕೆಯ ಪ್ರಧಾನ ವರದಿಗಾರ ಹರೀಶ್ ಬಂಟ್ವಾಳ್, ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ, ಸುದ್ದಿ ಮಾಹಿತಿ ವಿಭಾಗದ ಮುಖ್ಯಸ್ಥ ಕೃಷ್ಣ ಬೆಟ್ಟ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪತ್ರಿಕಾ ಪ್ರಸರಣಾಧಿಕಾರಿ ಗಣೇಶ್ ಕುಕ್ಕುದಡಿ ಸ್ವಾಗತಿಸಿದರು.
ಸಭೆಯಲ್ಲಿ ಸುಳ್ಯ ನಗರ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಾಂತರ ಭಾಗದ ಸುದ್ದಿ ಪ್ರತಿನಿಧಿಗಳು, ಸುದ್ದಿ ಏಜೆಂಟರುಗಳು, ಸುದ್ದಿ ಬಳಗದ ಸಿಬ್ಬಂದಿಗಳು ಉಪಸ್ಥಿತರಿದ್ದರು.