ಗಾಂಧಿನಗರ,:   ಕಾರಿನ ನಿಯಂತ್ರಣ ತಪ್ಪಿ ಜೀಪು ಸೇರಿದಂತೆ ನಾಲ್ಕು ದ್ವಿಚಕ್ರ ವಾಹನಗಳಿಗೆ ಡಿಕ್ಕಿ

0

ಕಾರಿನ ಮುಂಭಾಗ ಹಾಗೂ ಇತರ  ವಾಹನಗಳು ಜಖಂ

ಗಾಂಧಿನಗರ  ಜನತಾ ಕಾಂಪೌಂಡ್ ಬಳಿ ಸ್ವಿಫ್ಟ್ ಕಾರು ಚಾಲಕನ ನಿಯಂತ್ರಣ ತಪ್ಪಿ ಸ್ಥಳದಲ್ಲಿ ಪಾರ್ಕ್ ಮಾಡಲಾಗಿದ್ದ ಒಂದು ಜೀಪು ಸೇರಿ ಇತರ ನಾಲ್ಕು ದ್ವಿಚಕ್ರ ವಾಹನಗಳಿಗೆ ಡಿಕ್ಕಿಯಾದ ಘಟನೆ ಆಗಸ್ಟ್ 5 ರಂದು ಸಂಜೆ ವರದಿಯಾಗಿದೆ.

ಪುತ್ತೂರು ತಾಲೂಕಿನ  ಕುಂಬ್ರ ಮೂಲದ ಯುವಕ ತನ್ನ ದ್ವಿಚಕ್ರ ವಾಹನದಲ್ಲಿ ಬಂದು ತನ್ನ ಪರಿಚಯದ ವ್ಯಕ್ತಿಯೋರ್ವರ ಸ್ವಿಫ್ಟ್ ಕಾರನ್ನು ಕೊಂಡು ಹೋಗುತ್ತಿದ್ದ ಸಂದರ್ಭ ಏಕಾಏಕಿ ಕಾರಿನ ನಿಯಂತ್ರಣ ತಪ್ಪಿ ಮುಂಭಾಗದಲ್ಲಿ ಪಾರ್ಕ್ ಮಾಡಲಾಗಿದ್ದ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಘಟನೆ ನಡೆದ ಸ್ಥಳ ಜನ ನಿಭಿಡ ಪ್ರದೇಶವಾಗಿದ್ದು ಅದೃಷ್ಟವಶಾತ್ ಘಟನೆ ಸಂಭವಿಸುವ ಸಮಯ ಸ್ಥಳದಲ್ಲಿ ಸಾರ್ವಜನಿಕರು ಯಾರು ಇಲ್ಲದ ಕಾರಣ ದೊಡ್ಡ ಅನಾಹುತ ಒಂದು ತಪ್ಪಿದೆ.