ನಾಗಪಟ್ಟಣ ಬಳಿ ಬೈಕಿಗೆ ಬೈಕ್ ಡಿಕ್ಕಿ- ಸವಾರರಿಬ್ಬರಿಗೆ ಗಾಯ, ಆಸ್ಪತ್ರೆಗೆ ದಾಖಲು

0

ಆಲೆಟ್ಟಿ ರಸ್ತೆಯ ನಾಗಪಟ್ಟಣ ಶಾಲೆಯ ಬಳಿ‌ ಬೈಕುಗಳೆರಡರ ಮಧ್ಯೆ ಅಪಘಾತ ಸಂಭವಿಸಿ ಸವಾರರಿಬ್ಬರು ಗಾಯಗೊಂಡಿರುವ ಘಟನೆ ಇಂದು ಸಂಜೆ ವರದಿಯಾಗಿದೆ.

ಸುಳ್ಯದ ಕಡೆಯಿಂದ ಜಗದೀಶ್ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಹೋಂಡಾ ಶೈನ್ ಬೈಕಿಗೆ ನಾಗಪಟ್ಟಣ ಬಳಿ ಆಲೆಟ್ಟಿ ಕಡೆಯಿಂದ ಬರುತ್ತಿದ್ದ ಬೈಕೊಂದು ಡಿಕ್ಕಿ ಹೊಡೆದಿದೆ. ನಾಗಪಟ್ಟಣ ಅಂಗನವಾಡಿ ಶಾಲೆಗೆ ಮಕ್ಕಳನ್ನು ಕರೆದುಕೊಂಡು ಬರಲು ತಿರುಗುವ ಸಂದರ್ಭದಲ್ಲಿ ಆಲೆಟ್ಟಿ ಕಡೆಯಿಂದ ಅತೀ ವೇಗದಿಂದ ಯುವಕರು ಚಲಾಯಿಸಿಕೊಂಡು ಬಂದ ಬೈಕ್ ಡಿಕ್ಕಿ ಹೊಡೆಯಿತು.

ಪರಿಣಾಮವಾಗಿ ಬೈಕ್ ಸವಾರ ರಸ್ತೆಗೆ ಎಸೆಯಲ್ಪಟ್ಟು ಬೈಕ್ ಸವಾರ ಜಗದೀಶ್ ರವರ ಕಾಲಿನ ಹೆಬ್ಬೆರಳಿಗೆ ಹಾಗೂ ಡಿಕ್ಕಿ ಹೊಡೆದ ಬೈಕಿನಲ್ಲಿದ್ದ ಹಿಂಬದಿ ಸವಾರನ ಕೈಯ ಭಾಗಕ್ಕೆ ಗಾಯವಾಗಿದ್ದು‌ ಅವರಿಬ್ಬರನ್ನು ಸ್ಥಳೀಯ ರಾದ ಉಲ್ಲಾಸ್ ಕುದ್ಕುಳಿ ಮತ್ತು ಲಿಂಗಪ್ಪ ಗೌಡ ಉಳಿಯ ರವರು ಅಟೋ ರಿಕ್ಷಾದಲ್ಲಿ ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದು ಬಂದಿದೆ.