ನಾಲ್ಕೂರು : ಹೊಂಬೆಳಕು ತಂಡದಿಂದ ವಿನೂತನ ಕಾರ್ಯಕ್ರಮ

0

ಸ್ವಚ್ಛತೆಯೊಂದಿಗೆ ಹಸಿರು ಕ್ರಾಂತಿ

ನಾಲ್ಕುರು ಗ್ರಾಮದಲ್ಲಿರುವ ಸಮಾನ ಮನಸ್ಕರ ಹೊಂಬೆಳಕು ಸೇವಾ ತಂಡವು ಪ್ರತಿ ತಿಂಗಳೊಂದರಂತೆ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯವನ್ನು ನಡೆಸುತ್ತಿದ್ದು, ಈ ತಿಂಗಳ ಕಾರ್ಯಕ್ರಮವನ್ನು ವಿನೂತನವಾಗಿ ಆಚರಿಸಿತು.

ಸ್ವಾತಂತ್ರ್ಯೋತ್ಸವದ ಪೂರ್ವಭಾವಿಯಾಗಿ ನಾಲ್ಕೂರು ಗ್ರಾಮ ಆಡಳಿತ ಕಚೇರಿಯ ಸುತ್ತಮುತ್ತ ಗಿಡಗಂಟಿಗಳನ್ನು ಕಡಿದು, ಧ್ವಜಸ್ಥಂಭವನ್ನು ಸ್ವಚ್ಛಗೊಳಿಸಲಾಯಿತು.

ನಂತರ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ನಡುಗಲ್ಲು ಶಾಲಾ ಆವರಣದೊಳಗೆ ಹಣ್ಣಿನ ಗಿಡಗಳನ್ನು ನೆಟ್ಟು ಹಸಿರು ಕ್ರಾಂತಿ ಕಾರ್ಯಕ್ರಮಕ್ಕೆ ಮುನ್ನುಡಿ ಬರೆದರು.

ಕಾರ್ಯಕ್ರಮದಲ್ಲಿ ತಂಡದ ಸಂಚಾಲಕರಾದ ಚರಣ್ ದೇವಪ್ಪಜ್ಜನಮನೆ ಮತ್ತು ಸದಸ್ಯರು,

ಶಾಲಾ ಶಿಕ್ಷಕರು ಶಾಲಾ ಅಭಿವೃದ್ಧಿ ಮತ್ತು ಮೇಲ್ ಉಸ್ತುವಾರಿ ಸಮಿತಿಯ ಪದಾಧಿಕಾರಿಗಳು ಗ್ರಾಮ ಆಡಳಿತ ಕಚೇರಿ ಸಿಬ್ಬಂದಿಗಳು ಮತ್ತಿತರರಿದ್ದರು.

ವರದಿ ಡಿ.ಎಚ್