ಉಬರಡ್ಕ ಕಲ್ಲುಪಣೆ ಅಂಗನವಾಡಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಉಬರಡ್ಕ ಮಿತ್ತೂರು ಗ್ರಾಮದ ಕಲ್ಲುಪಣೆ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಷರಣೆಯನ್ನು ಆ.15 ರಂದು ಆಚರಿಸಲಾಯಿತು. ಗ್ರಾ.ಪಂ ಮಾಜಿ ಅಧ್ಯಕ್ಷ ಪಿ.ಎಸ್. ಗಂಗಾಧರ ಧ್ವಜಾರೋಹಣಗೈದರು. ಮಕ್ಕಳಿಗೆ ವಾಸುದೇವ ರವರು ಬಹುಮಾನ ವಿತರಿಸಿದರು.

ಪುರುಷೋತ್ತಮ ರವರು ಪುಸ್ತಕ ಮತ್ತು ಪೆನ್ಸಿಲ್ ಬಹುಮಾನ ನೀಡಿದರು. ಈ ಸಂದರ್ಭದಲ್ಲಿ ಅಂಗನವಾಡಿಯಿಂದ ಬೀಳ್ಕೊಂಡ ವಿದ್ಯಾರ್ಥಿಗಳು ಕೊಡುಗೆಯಾಗಿ ಬುಕ್ ಸ್ಟ್ಯಾಂಡ್ ನೀಡಿದರು.