ಬೆಂಗಳೂರು: ಕೆ.ಡಿ.ಕೆ. ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

0

ಬೆಂಗಳೂರಿನ ಕೆ.ಡಿ.ಕೆ. ಗೌಡ ಸಮಾಜದ ವತಿಯಿಂದ ನಮ್ಮನೆ ಆವರಣದಲ್ಲಿ 76ನೇ ಸ್ವಾತಂತ್ರೋತ್ಸವವನ್ನು ಆ.15ರಂದು ಆಚರಿಸಲಾಯಿತು.
ಸಮಾಜದ ಅಧ್ಯಕ್ಷ ರವೀಂದ್ರನಾಥ್ ಕೇವಳ ಅವರು ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಜಂಟಿ ಕಾರ್ಯದರ್ಶಿ ಶ್ರೀಮತಿ ನಾಗವೇಣಿ ಓಂಪ್ರಕಾಶ್ ರವರು ಧ್ವಜಾರೋಹಣೆ ಮಾಡಿದರು. ಕರ್ನಾಟಕ ಸರ್ಕಾರದ ನಿವೃತ್ತ ಕಾರ್ಯದರ್ಶಿ ಓಂಪ್ರಕಾಶ್ ರವರು ಉಪಸ್ಥಿತರಿದ್ದರು.
ಸಮಾಜದ ಉಪಾಧ್ಯಕ್ಷ ಪಳಂಗಪ್ಪನವರು ವಂದಿಸಿದರು.