ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿ ನಿಲಯದಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಜೆ ಸಿ ಐ ಸುಳ್ಯ ಪಯಶ್ವಿನಿ ವತಿಯಿಂದ ವಿವೇಕಾನಂದ ಸರ್ಕಲ್ ಬಳಿ ಇರುವ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿ ನಿಲಯದಲ್ಲಿ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಲಾಯಿತು.

ಭಾರತೀಯ ಜೂನಿಯರ್ ಛೆಂಬರ್ ವಲಯ 15ರ ಉಪಾಧ್ಯಕ್ಷ ಜೆಸಿ JFM ದೇವರಾಜ್‌ ಕುದ್ಪಾಜೆ ಧ್ವಜಾರೋಹಣ ನೆರವೇರಿಸಿದರು.ನಂತರ ದಿ. ದೇವರಾಜ್ ಅರಸು ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯ ಕುರುಂಜಿಭಾಗ್ ಸುಳ್ಯ ಇಲ್ಲಿ ನಿಲಯದ ಮೇಲ್ವಿಚಾರಕಿ ಗೀತಾ ರವರು ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿದರು.

ಜೆಸಿಐ ವಲಯ15 ಸಂಯೋಜಕ ಜೆಸಿ ಗುರುರಾಜ ಅಜ್ಜಾವರ, ಪಯಸ್ವಿನಿ ಜೇಸಿಯ ಅದ್ಯಕ್ಷ ಜೆಸಿ ನವೀನ್ ಕುಮಾರ್,ನಿಕಟಪೂರ್ವಧ್ಯಕ್ಷ ಜೆಸಿ ರಂಜಿತ್ ಕುಕ್ಕೆಟ್ಟಿ, ಕಾರ್ಯದರ್ಶಿ ಜೆಸಿ ಸುರೇಶ್ ಕಾಮತ್,ಜೆಸಿ ಲತಾ ಸುಪ್ರೀತ್,

ಜೆಸಿ ಗುರುಪ್ರಸಾದ್ ಹಾಗೂ ನಿಲಯದ ಸಿಬ್ಬಂದಿಗಳು ವಿದ್ಯಾರ್ಥಿಗಳು ಉಪಸ್ಥಿತಿರಿದ್ದರು.