ಆದರ್ಶ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘ(ರಿ) ಪೆರುಮುಂಡ ಕಲ್ಲಪಳ್ಳಿ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ

0

ಆದರ್ಶ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘ(ರಿ) ಪೆರುಮುಂಡ ಕಲ್ಲಪಳ್ಳಿ ಇದರ ವತಿಯಿಂದ ಇಂದು 76ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.


ಧ್ವಜಾರೋಹಣವನ್ನು ನಿವೃತ್ತ ಯೋಧ ಬಾಬು‌ ಕೆ.ಜೆ‌ ಚೆರಂಗಡವ್ ಪಾಣತ್ತೂರು ಇವರು‌ ನೆರವೇರಿಸಿದರು. ಸಭಾ ಕಾರ್ಯಕ್ರಮದ ಅತಿಥಿ‌ ಯಾಗಿ ರಮೇಶ್ (ಸಿವಿಲ್‌ ಪೋಲಿಸ್ ಆಫಿಸರ್ ರಾಜಪುರಂ), ಚಂದ್ರಾವತಿ ಬಡ್ಡಡ್ಕ‌ (ಲೇಖಕರು), ಶೀಲಾವತಿ ಯಶೋಧರ( ಶ್ರೀ.ಕ್ಷೇ.ಧ. ಗ್ರಾ.ಯೊ.ಒ.ಅಧ್ಯಕ್ಷರು), ಶ್ರೀಕುಮಾರನ್‌(ಪೋಲಿಸ್ ರಾಜಪುರಂ) ವೇದಿಕೆಯಲ್ಲಿ‌ ಉಪಸ್ಥಿತರಿದ್ದರು.
ಸಭಾಧ್ಯಕ್ಷತೆಯನ್ನ ಸಂಘದ ಅಧ್ಯಕ್ಷ ಶ್ರೀಜಿತ್ ಪೆರುಮುಂಡ ವಹಿಸಿದರು, ಮಹಿಳಾ ಸಂಘದ‌ ಅಧ್ಯಕ್ಷ ರಾದ ಮಂಜುಳಾಗೋಪಾಲ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಿವೃತ್ತ ಯೋಧರಾದ ಬಾಬು ಕೆ.ಜೆ‌ ಚೆರಂಗಡವ್ ಇವರನ್ನು‌ ನಿವೃತ್ತ ಯೋಧರಾದ‌ ದಯಾನಂದ ಪಿ.ಕೆ ಪೆರುಮುಂಡ ಇವರು‌ ಸನ್ಮಾನಿಸಿದರು.‌
ಕಾರ್ಯಕ್ರಮವನ್ನು ರಮೇಶ್ ಪಿ.ಕೆ ಪೆರುಮುಂಡ ನಿರೂಪಿಸಿ , ರಕ್ಷಾ ಪಿ.ಎಮ್ ಸ್ವಾಗತಿಸಿದರು ಮತ್ತು ಧನ್ಯವಾದ ಕಾರ್ಯಕ್ರಮವನ್ನು ರಾಜೇಶ್ ಪಿ.ಎ. ಪೆರುಮುಂಡ ರವರು ನೆರವೇರಿಸಿದರು.