ಜಯನಗರ: ಕೆಂಪು ಕಲ್ಲು ತುಂಬಿದ ಲಾರಿ ಹಿಂಬದಿಗೆ ಚಲಿಸಿ ಪಲ್ಟಿ, ವಾಹನ ಜಖಂ, ಚಾಲಕ ಅಪಾಯದಿಂದ ಪಾರು

0

ಜಯನಗರ ಮನೆ ನಿರ್ಮಾಣ ಕಾಮಗಾರಿಗೆ ಕೆಂಪುಕಲ್ಲು ತುಂಬಿಕೊಂಡು ಬಂದಿದ್ದ ಲಾರಿಯೊಂದು ಹಿಂಬದಿಗೆ ಚಲಿಸಿ ಪಲ್ಟಿಯಾದ ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ.
ಜಯನಗರ ಶ್ರೀ ಗಜಾನನ ಭಜನಾ ಮಂದಿರದ ಬಳಿ ಮನೆಯೊಂದರ ಕೆಲಸಕ್ಕೆ ಅಜ್ಜಾವರ ಭಾಗದಿಂದ ಕೆಂಪು ಕಲ್ಲನ್ನು ತುಂಬಿಕೊಂಡು ಬಂದಿದ್ದ ಲಾರಿ ಚಾಲಕ ಲಾರಿಯನ್ನು ನಿಲ್ಲಿಸಿ ಇಳಿಜಾರು ಪ್ರದೇಶವಾದ ಕಾರಣ ಲಾರಿಯ ಹಿಂಬದಿಯ ಚಕ್ರಕ್ಕೆ ಕಟ್ಟೆಯನ್ನು ನೀಡಿದ್ದು ಆದರೆ ಅದನ್ನು ಲೆಕ್ಕಿಸದ ಲಾರಿ ಹಿಂಬದಿಗೆ ಚಲಿಸಿ ಪಕ್ಕದಲ್ಲಿದ್ದ ಶ್ರೀ ಗಜಾನನ ಭಜನಾ ಮಂದಿರದ ಕಾಂಪೌಂಡನ್ನು ಒಡೆದು ಮಂದಿರದ ಆವರಣದೊಳಗೆ ಪಲ್ಟಿಯಾಗಿದೆ.
ಘಟನೆಯಿಂದ ಚಾಲಕ ಅಪಾಯದಿಂದ ಪಾರಾಗಿದ್ದು ವಾಹನ ಜಖಂಗೊಂಡು ಮತ್ತು ಕಂಪೌಂಡಿಗೆ ಹಾನಿ ಸಂಭವಿಸಿದೆ.