ಸುಳ್ಯದಲ್ಲಿ ಖ್ಯಾತ ರಂಗ ಮಾಂತ್ರಿಕ ಶಿವದೂತೆ ಗುಳಿಗೆ ನಾಟಕದ ನಿರ್ದೇಶಕ ವಿಜಯಕುಮಾರ್ ಕೊಡಿಯಾಲಬೈಲು ರವರಿಗೆ ಸನ್ಮಾನ

0

ಸುಳ್ಯ ಸೆವೆನ್ ಸ್ಟಾರ್‌ ಬಳಗದ ಆಯೋಜನೆಯಲ್ಲಿ ಕೇರ್ಪಳ ಬಂಟರ ಭವನದಲ್ಲಿ ವಿಶೇಷ ಆಕರ್ಷಣೆಯ ಶಿವದೂತೆ ಗುಳಿಗೆ ತುಳು ನಾಟಕ ಪ್ರದರ್ಶನ ಗೊಂಡಿತು.


ಈ ಸಂದರ್ಭದಲ್ಲಿ ಖ್ಯಾತ ರಂಗ ಕರ್ಮಿ ನಾಟಕ ಚಲನಚಿತ್ರ ನಿರ್ದೇಶಕ ವಿಜಯಕುಮಾರ್ ಕೊಡಿಯಾಲಬೈಲು ರವರಿಗೆ ಸೆವೆನ್ ಸ್ಟಾರ್ ಬಳಗದ ವತಿಯಿಂದ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಸುಳ್ಯ ಬಂಟರ ಸಂಘದ ಅಧ್ಯಕ್ಷ ಜಯಪ್ರಕಾಶ್ ರೈ , ಸುಧಾಕರ ರೈ ನೆಟ್ ಕಾಂ, ಕಾರ್ಯದರ್ಶಿ ಸುಭಾಶ್ಚಂದ್ರ ರೈ ತೋಟ, ಗಂಗಾಧರ ರೈ, ದಯಾಕರ ಆಳ್ವ ಉಪಸ್ಥಿತರಿದ್ದರು. ಭಗವತಿ ಹಾರ್ಡ್ವೇರ್ ಮಾಲಕ ರಮೇಶ್ ಶೆಟ್ಟಿ ಸನ್ಮಾನಿತರ ಪರಿಚಯ ವಾಚಿಸಿದರು. ನ.ಪಂ. ನಾಮ ನಿರ್ದೇಶನ ಸದಸ್ಯ ಬೂಡು ರಾಧಾಕೃಷ್ಣ ರೈ ಕಾರ್ಯಕ್ರಮ ನಿರೂಪಿಸಿದರು. ಸೆವೆನ್ ಸ್ಟಾರ್ ಬಳಗದ ಸಂಚಾಲಕ ಸುನಿಲ್ ಕೇರ್ಪಳ, ಕುಸುಮಾಧರ ರೈ ಬೂಡು, ಪ್ರಭಾಕರ ಬೂಡು,ಸೀತಾರಾಮ ಕೇರ್ಪಳ ಸಹಕರಿಸಿದರು.