ಕೊಲ್ಲಮೊಗ್ರ ಕೆವಿಜಿ ಪ್ರೌಢಶಾಲಾ ದೈ.ಶಿ.ಶಿಕ್ಷಕ ಬಾಲಕೃಷ್ಣ ಗೌಡರಿಗೆ ಸ್ಕೌಟ್ ನ ಹಿಮಾಲಯ ವುಡ್ ಬ್ಯಾಡ್ಜ್ ಪ್ರಶಸ್ತಿ

0


ಕೊಲ್ಲಮೊಗ್ರ ಕೆ.ವಿ.ಜಿ.ಅನುದಾನಿತ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಗೌಡರವರಿಗೆ ಸ್ಕೌಟ್ ನ ಹಿಮಾಲಯ ವುಡ್ ಬ್ಯಾಡ್ಜ್ ಪ್ರಶಸ್ತಿ ಗೌರವ ದೊರೆತಿದೆ.
ಬಾಲಕೃಷ್ಣ ಗೌಡರವರು ಧಾರವಾಡದಲ್ಲಿ ನಡೆದ ಸ್ಕೌಟ್ ನ ಹಿಮಾಲಯ ವುಡ್ ಬ್ಯಾಡ್ಜ್ ತರಬೇತಿ ಶಿಬಿರದಲ್ಲಿ ಶಿಬಿರಾರ್ಥಿಯಾಗಿ ಭಾಗವಹಿಸಿದ್ದರು. ಶಿಬಿರದಲ್ಲಿ ತೋರಿದ ಅತ್ಯುತ್ತಮ ನಿರ್ವಹಣೆಯನ್ನು ಪರಿಗಣಿಸಿ ಮಂಗಳೂರಿನ ಪಿಲಿಕುಳ ಜಿಲ್ಲಾ ತರಬೇತಿ ಕೇಂದ್ರದಲ್ಲಿ ನಡೆದ ಸ್ಕೌಟ್ & ಗೈಡ್ಸ್ ಶಿಕ್ಷಕರ ತರಬೇತಿ ಶಿಬಿರದ ಸಮಾರೋಪದಲ್ಲಿ ಸ್ಕೌಟ್ ಹಿಮಾಲಯ ವುಡ್ ಬ್ಯಾಡ್ಜ್ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.