ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 110ನೇ ಮಹಾಸಭೆ

0


🔸494.57 ಕೋಟಿ ರೂ.ವ್ಯವಹಾರ
🔸1.51 ಕೋಟಿ ರೂ.ನಿವ್ವಳ ಲಾಭ

ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 110ನೇ ವಾರ್ಷಿಕ ಮಹಾ ಸಭೆಯು ಆ.26 ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಗಣೇಶ್ ಪೈ ರವರ ಅಧ್ಯಕ್ಷತೆಯಲ್ಲಿ ನಡೆಯಿತು.


ಸಂಘವು 2022-23 ನೇ ಸಾಲಿನಲ್ಲಿ 4811 ಸದಸ್ಯರನ್ನು ಹೊಂದಿದೆ. 8.01 ಕೋಟಿ ರೂ. ಪಾಲು ಬಂಡವಾಳ ಸಂಗ್ರಹಿಸಿ, 48.07 ಕೋಟಿ ರೂ. ಠೇವಣಿ ಹೊಂದಿರುತ್ತದೆ. ರೂ 37.82 ಕೋಟಿ ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನಿಂದ ಸಾಲ ಪಡೆದು ರೂ.77.76 ಕೋಟಿ ಸಾಲವನ್ನು ವಿವಿಧ ಉದ್ದೇಶಗಳಿಗೆ ವಿತರಿಸಿದ್ದು, ವಿತರಿಸಿದ ಸಾಲಗಳ ಪೈಕಿ ಶೇ. 97.72 ವಸೂಲಾಗಿರುತ್ತದೆ.ರೂ. 494. 57 ಕೋಟಿ ಒಟ್ಟು ವಾರ್ಷಿಕ ವ್ಯವಹಾರ ವನ್ನು ಮಾಡಲಾಗಿದೆ. ವರದಿ ಸಾಲಿನಲ್ಲಿ ಒಟ್ಟು ರೂ.1,51,31,721-೦೦ನಿವ್ವಳ ಲಾಭವನ್ನು ಗಳಿಸಿ , ಸದಸ್ಯರಿಗೆ 8 ಶೇ. ಡಿವಿಡೆಂಟ್ ವಿತರಿಸಲು ಶಿಫಾರಸ್ಸು ಮಾಡಿದೆ. ಎಂದು ಸಂಘದ ಅಧ್ಯಕ್ಷ ಗಣೇಶ್ ಪೈ ರವರು ವಿವರಿಸಿದರು.

ಪಿಯುಸಿ-ಎಸ್ ಎಸ್ ಎಲ್ ಸಿ ಸಾಧಕರಿಗೆ ಪ್ರೋತ್ಸಾಹ ಧನ: ಸಂಘದ ವಿದ್ಯಾನಿಧಿ ಯೋಜನೆಯಲ್ಲಿ ಪಂಜ ಸರಕಾರಿ ಪ್ರೌಢಶಾಲೆ, ಪಂಜ ಮೊರಾರ್ಜಿ ದೇಸಾಯಿ ವಸತಿ ಪ್ರೌಢಶಾಲೆ ಹಾಗೂ ದ್ವಿತೀಯ ಪಿ.ಯು.ಸಿ ಯಲ್ಲಿ ಅತ್ಯಧಿಕ ಅಂಕಗಳಿಸಿದ ತಲಾ ಇಬ್ಬರನ್ನು ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು.


ಪಂಜದ ಹರೀಶ್ ಬೊಳ್ಳಾಜೆ ರವರ ಪುತ್ರ ಪಂಜ ಮೊರಾರ್ಜಿ ದೇಸಾಯಿ ಪ್ರೌಢ ಶಾಲಾ ವಿದ್ಯಾರ್ಥಿ ಸನತ್ ಬಿ.ಎಚ್, ಐವತ್ತೊಕ್ಲು ಕೋಡಿ ವಸಂತ ಗೌಡರ ರವರ ಪುತ್ರ ಪಂಜ ಮೊರಾರ್ಜಿ ದೇಸಾಯಿ ಪ್ರೌಢ ಶಾಲಾ ವಿದ್ಯಾರ್ಥಿ ವಿಕ್ರಮ್ ಕೆ ವಿ,


ಪಂಜದ ಅಡ್ಕ ಶಿವರಾಮ ಎ ರವರ ಪುತ್ರಿ ಪಂಜ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿನಿ ಯಶ್ವಿತಾ ಎ, ಕೂತ್ಕುಂಜ ಚಿದ್ಗಲ್ಲು ಗೋಪಾಲ ಗೌಡರ ಪುತ್ರಿ ಪಂಜ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿನಿ ಮೇಘಶ್ರೀ ಸಿ,ಬಳ್ಪ ಕುಂಜತ್ತಾಡಿ ಲೋಕೇಶ್ ಕೆ ರವರ ಪುತ್ರಿ ಪಂಜ ಸರಕಾರಿ ಪ.ಪೂ. ಕಾಲೇಜು ವಿದ್ಯಾರ್ಥಿನಿ ದಿವ್ಯ ಕೆ, ಪಂಜದ ಪೊಳೆಂಜ ಇಸ್ಮಾಯಿಲ್ ರವರ ಪುತ್ರ ಪಂಜ ಪ.ಪೂ. ಕಾಲೇಜು ವಿದ್ಯಾರ್ಥಿ ಮೊಹಮ್ಮದ್ ಹಿಸಾಂ,ಬಳ್ಪ ಈಶ್ವರ ಗೌಡರ ಪುತ್ರಿ ಪಂಜ ಪ.ಪೂ. ಕಾಲೇಜು ವಿದ್ಯಾರ್ಥಿನಿ ಸ್ವಾತಿ ಕೆ , ಬೀದಿಗುಡ್ಡೆ ವಸಂತ ಗೌಡರ ಪುತ್ರಿ ಪಂಜ ಪ.ಪೂ. ಕಾಲೇಜು ವಿದ್ಯಾರ್ಥಿನಿ
ಶ್ವೇತಾ ಬಿ ರವರು ಪ್ರೋತ್ಸಾಹ ಧನ ,ಗೌರವ ಸ್ವೀಕರಿಸಿದರು.


ಅಧಿಕ ವ್ಯವಹಾರ ಮಾಡಿದ ಸದಸ್ಯರಿಗೆ ಗೌರವಾರ್ಪಣೆ:

2022- 23ನೇ ಸಾಲಿನಲ್ಲಿ ಅತ್ಯಧಿಕ ವ್ಯವಹಾರ ಮಾಡಿರುವ ಸದಸ್ಯರನ್ನು ಗುರುತಿಸಿ ಗೌರವಿಸಲಾಯಿತು. ಸಂಘದ ಮೂಲಕ ಅತ್ಯಧಿಕ ಅಡಿಕೆ ಮಾರಾಟ ಡಾ.ರಾಮಯ್ಯ ಭಟ್, ಚಂದ್ರಶೇಖರ ಶಾಸ್ತ್ರಿ ಚಿರಶ್ಯಾಮಲ, ಅತ್ಯಧಿಕ ಕೊಕ್ಕೋ ಮಾರಾಟ ಡಾ.ಲೀಲಾವತಿ, ಜನಾರ್ಧನ ಜತ್ತಿಲ, ಅತ್ಯಧಿಕ ರಬ್ಬರ್ ಮಾರಾಟ ಸತ್ಯದೀಪ್ ಎಂ ಆರ್,ಷಣ್ಮುಖ ಕೆರೆಯಡ್ಕ, ಅತ್ಯಧಿಕ ಗೊಬ್ಬರ ಖರೀದಿ ಚಂದ್ರಶೇಖರ ಶಾಸ್ತ್ರಿ ಚಿರಶ್ಯಾಮಲ , ಮಹಾವೀರ ಎನ್ , ಅತ್ಯಧಿಕ ಪೈಪು ಮತ್ತು ಬಿಡಿ ಭಾಗ ಖರೀದಿ ವಾಚಣ್ಣ ಗೌಡ ಜಾಕೆ, ಹೊನ್ನಪ್ಪ ಗೌಡ ಕಮಿಲ,ಅತ್ಯಧಿಕ ಗ್ರಹ ಬಳಕೆ ಸಾಮಗ್ರಿ ಖರೀದಿ ಸುರೇಂದ್ರ ಎಣ್ಣೆಮಜಲು,ದಯಾನಂದ ಕಿನ್ನಿಕುಮೇರಿ, ಅತ್ಯುತ್ತಮ ಗ್ರಾಹಕರು ಶ್ರೀಮತಿ ಸುವರ್ಣಿನಿ ಎನ್.ಎಸ್
ಚಿರಶ್ಯಾಮಲ, ಜಯರಾಮ ರಾವ್ ಕೆ ಪಂಜ, ಅತ್ಯುತ್ತಮ ನವೋದಯ ಸ್ವ-ಸಹಾಯ ಗುಂಪುಗಳಾಗಿ ಮೇಘಶ್ರೀ ಮಹಿಳಾ ನವೋದಯ ಸ್ವ-ಸಹಾಯ ಸಂಘ ಐವತ್ತೊಕ್ಲು, ಭುವನೇಶ್ವರಿ ಮಹಿಳಾ ನವೋದಯ ಸ್ವ-ಸಹಾಯ ಸಂಘ ಬಳ್ಪ, ಧರ್ಮಶ್ರೀ ಮಹಿಳಾ ನವೋದಯ ಸ್ವ-ಸಹಾಯ ಸಂಘ ಕೂತ್ಕುಂಜ,ನರಸಿಂಹ ನವೋದಯ ಸ್ವ-ಸಹಾಯ ಸಂಘ ಕೇನ್ಯ ಇವರು ಗೌರವ ಸ್ವೀಕರಿಸಿದರು.

ಸಾಲವನ್ನು ವಾಯಿದೆಗೆ ಸರಿಯಾಗಿ ಮರುಪಾವತಿಸಿದ ಎಲ್ಲಾ ಸದಸ್ಯರ ಪೈಕಿ ಸ್ಥಳದಲ್ಲಿ ಅದೃಷ್ಟ ಚೀಟಿ ತೆಗೆದು ಐವರನ್ನು ಸನ್ಮಾನಿಸಲಾಯಿತು. ಗುಣಸಾಗರ ಕಟ್ಟ , ರಾಮಯ್ಯ ಗೌಡ ಚಿದ್ಗಲ್ಲು , ಹೊನ್ನಪ್ಪ ಪಲ್ಲೋಡಿ, ಲೋಕೇಶ್ ಪಾಂಡಿಗದ್ದೆ , ವಿಠಲ ರೈ ಕೇನ್ಯ ರವರನ್ನು ಸನ್ಮಾನಿಸಲಾಯಿತು.ಮಹಾಸಭೆಯಲ್ಲಿ ಹಾಜರಿದ್ದ ನಾಲ್ಕು ಅದೃಷ್ಟ ಶಾಲಿ ಸದಸ್ಯರನ್ನು ಲಕ್ಕಿ ಚೀಟಿ ತೆಗೆದು ಆಯ್ಕೆ ಮಾಡಿ ಸಂಘದ ಪೂರ್ವಾಧ್ಯಕ್ಷ ಆನಂದ ಗೌಡ ಕಂಬಳರವರ ಯೋಜನೆಯಂತೆ ಕುಕ್ಕೆ ಸಿಲ್ಕ್ ಸುಬ್ರಹ್ಮಣ್ಯ ಇವರ ಪ್ರಾಯೋಜಕತ್ವದಲ್ಲಿ ಸೀರೆ ನೀಡಲಾಯಿತು. ಮುಂದಿನ ವರ್ಷದ ಈ ಯೋಜನೆಗಾಗಿ ರೂ. 50000 ಠೇವಣಿಯನ್ನು ಅವರು ಸಂಘಕ್ಕೆ ಹಸ್ತಾಂತರಿಸಿದರು. ಶ್ರೀಮತಿ ದೇವಕಿ ಚಿದ್ಗಲ್, ರಮೇಶ್ ಕುಳ್ಳಾಜೆ, ಜಗದೀಶ್ ಅಡ್ಡತೋಡು, ಶ್ರೀಮತಿ ಲೀಲಾವತಿ ಕಲ್ಲಗದ್ದೆ, ಗಗನ್ ಕಟ್ಟೆಮನೆ ವಿಜೇತರಾಗಿದ್ದು ಬಹುಮಾನ ಸ್ವೀಕರಿಸಿದರು.
.ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ
ರಘುನಾಥ ರೈ ಕೆರೆಕ್ಕೋಡಿ,
ನಿರ್ದೇಶಕರಾದ ಚಂದ್ರಶೇಖರಶಾಸ್ತ್ರಿ ಸಿ, ಸುಬ್ರಹ್ಮಣ್ಯ ಕುಳ, ಲಿಗೋಧರ ಆಚಾರ್ಯ,ಶ್ರೀಕೃಷ್ಣಭಟ್ ಪಟೋಳಿ, , ವಾಚಣ್ಣ ಕೆರೆಮೂಲೆ, ಚಿನ್ನಪ್ಪ ಗೌಡ ಚೊಟ್ಟೆಮಜಲು, ಕಿಟ್ಟಣ್ಣ ಪೂಜಾರಿ ಕಾಂಜಿ , ಶ್ರೀಮತಿ ಮೋಹಿನಿ ಬೊಳ್ಮಲೆ, ಶ್ರೀಮತಿ ಹೇಮಲತಾ ಚಿದ್ಗಲ್, ಮುದರ ಐವತ್ತೊಕ್ಲು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಘದ ಹಿರಿಯ ಸದಸ್ಯರಾದ ಶ್ರೀಮತಿ ಪ್ರಭಾವತಿ ಕೆ ಹೆಗ್ಡೆ ದೀಪ ಪ್ರಜ್ವಲನೆ ಗೊಳಿಸಿದರು. ಸುಮಾ ಕೋಟೆ ಪ್ರಾರ್ಥಿಸಿದರು.ಸಂಘದ ಅಧ್ಯಕ್ಷ ಗಣೇಶ್ ಪೈ ಸ್ವಾಗತಿಸಿದರು.ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ ವಾರ್ಷಿಕ ವರದಿ ವಾಚಿಸಿದರು.ಲೋಹಿತ್ ಎಣ್ಣೆಮಜಲು ನಿವ್ವಳ ಲಾಭ ವಿಂಗಡಣೆ ವಾಚಿಸಿದರು.ಚಂದ್ರಶೇಖರ ಇಟ್ಯಡ್ಕ ನಿರೂಪಿಸಿದರು..ಸಂಘದ ನಿರ್ದೇಶಕ ವಾಚಣ್ಣ ಕೆರೆಮೂಲೆ‌ ವಂದಿಸಿದರು.