ಪೆರಾಜೆ : ಚಿಗುರು ಕ್ರೀಡಾ ಮತ್ತು ಕಲಾ ಯುವಕ ಮಂಡಲದ ಮಹಾಸಭೆ

0

ಅಧ್ಯಕ್ಷರಾಗಿ ಭುವನ್ ಕುಂಬಳಚೇರಿ, ಕಾರ್ಯದರ್ಶಿಯಾಗಿ ಜೀವನ್ ಮಜಿಕೋಡಿ ಪುನರಾಯ್ಕೆ

ಪೆರಾಜೆ ಚಿಗುರು ಕ್ರೀಡಾ ಮತ್ತು ಕಲಾ ಯುವಕ ಮಂಡಲದ ವಾರ್ಷಿಕ ಮಹಾಸಭೆಯು ಆ.27 ರಂದು ಕುಂಬಳಚೇರಿ ಶ್ರೀ ವಯಾನಾಟ್ ಕುಲವನ್ ದೈವಸ್ಥಾನದ ಸಭಾಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಭುವನ್ ಕುಂಬಳಚೇರಿ ಅಧ್ಯಕ್ಷತೆ ವಹಿಸಿದ್ದರು. ಜೀವನ್ ಮಜಿಕೋಡಿ ವಾರ್ಷಿಕ ವರದಿ ವಾಚಿಸಿದರು. ಖಜಾಂಜಿ ಪ್ರವೀಣ್ ಮಜಿಕೋಡಿ ವಾರ್ಷಿಕ ಲೆಕ್ಕ ಪತ್ರವನ್ನು ಮಂಡಿಸಿದರು.

ಈ ಸಂದರ್ಭದಲ್ಲಿ ಹಳೆ ಆಡಳಿತ ಮಂಡಳಿಯನ್ನೇ ಪುನರಾಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಭುವನ್ ಕುಂಬಳಚೇರಿ, ಉಪಾಧ್ಯಕ್ಷರಾಗಿ ಪ್ರದೀಪ್ ಕುಂಬಳಚೇರಿ, ಕಾರ್ಯದರ್ಶಿಯಾಗಿ ಜೀವನ್ ಮಜಿಕೋಡಿ, ಖಜಾಂಜಿಯಾಗಿ ಪ್ರವೀಣ್ ಮಜಿಕೋಡಿ ಪುನರಯ್ಕೆಯಾದರು.

ನಿರ್ದೇಶಕರುಗಳಾಗಿ ರಮೇಶ್ ಮಜಿಕೋಡಿ, ಪ್ರವೀಣ್ ನೆಕ್ಕಿಲ, ನಿತಿನ್ ಮಜಿಕೋಡಿ, ದಿನೇಶ್ ಎಸ್. ಮಜಿಕೋಡಿ ಆಯ್ಕೆಯಾದರು.
ರಮೇಶ್ ಮಜಿಕೋಡಿ ಪ್ರಾರ್ಥಿಸಿದರು. ಸಂಘದ ಕಾರ್ಯದರ್ಶಿ ಜೀವನ್ ಮಜಿಕೋಡಿ ಸ್ವಾಗತಿಸಿ, ಖಜಾಂಜಿ ಪ್ರವೀಣ್ ಮಜಿಕೋಡಿ ವಂದಿಸಿದರು.