ರೋಟರಿ ಕ್ಲಬ್ ಬೆಳ್ಳಾರೆ ಟೌನ್ ವತಿಯಿಂದ ಬೆಳ್ಳಾರೆಯಲ್ಲಿ ಉಚಿತ ನೇತ್ರ ಚಿಕಿತ್ಸಾ ಸೇವಾ ಶಿಬಿರ

0

ರೋಟರಿ ಕ್ಲಬ್ ಬೆಳ್ಳಾರೆ ಟೌನ್ ,ಆನಂದಾಶ್ರಮ ಸೇವಾ ಟ್ರಸ್ಟ್ ಪುತ್ತೂರು, ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಳಾರೆ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಮಂಗಳೂರು ಇವರ ಸಹಭಾಗಿತ್ವದಲ್ಲಿ ಉಚಿತ ನೇತ್ರ ಚಿಕಿತ್ಸಾ ಸೇವಾ ಶಿಬಿರ ಸೆ.01 ರಂದು ಬೆಳಿಗ್ಗೆ ಅಮ್ಮು ರೈ ಕಾಂಪ್ಲೆಕ್ಸ್ ನ ದೇವಿ ಹೈಟ್ಸ್ ನಲ್ಲಿ ನಡೆಯಿತು.
ಪುತ್ತೂರು ಆನಂದಾಶ್ರಮದ ಸೇವಾ ಕರ್ತೆ ಡಾ.ಗೌರಿ ಪೈ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು.ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಯ ನೇತ್ರಾಧಿಕಾರಿ ಡಾ.ಶಾಂತರಾಜ್, ಮಂಗಳೂರು ಕೆ.ಎಂ.ಸಿ.ಆಸ್ಪತ್ರೆಯ ಕಣ್ಣಿನ ವೈದ್ಯಾಧಿಕಾರಿ ಇಚಾಷ್, ರೋಟರಿ ಕ್ಲಬ್ ಅಧ್ಯಕ್ಷ ಶಶಿಧರ ಬಿ.ಕೆ, ಕಾರ್ಯದರ್ಶಿ ವಿಶ್ವನಾಥ ಕೆ ಉಪಸ್ಥಿತರಿದ್ದರು.


ರೊ.ವಿನಯ ವಿನಯ ಕುಮಾರ್ ಕಾರ್ಯಕ್ರಮ ನಿರೂಪಿಸಿ, ಅಧ್ಯಕ್ಷ ಶಶಿಧರ್ ಬಿ.ಕೆ.ಸ್ವಾಗತಿಸಿ, ವಂದಿಸಿದರು.
ರೊ.ಎ.ಕೆ.ಮಣಿಯಾಣಿ ಹಾಗೂ ರೊ.ಕ್ಲಬ್ ನ ಎಲ್ಲಾ ಸದಸ್ಯರು ಸಹಕರಿಸಿದರು.


ಉಚಿತ ಕಣ್ಣಿನ ಪರೀಕ್ಷೆ, ಚಿಕಿತ್ಸೆ ಮತ್ತು ಸಲಹೆ,ಉಚಿತ ಕಣ್ಣಿನ ಪೊರೆ ಆಪರೇಶನ್,ಉಚಿತ ಪ್ರಯಾಣ,ವಸತಿ,ಊಟ ಮತ್ತು ಉಪಾಹಾರ,ಉಚಿತ ಕನ್ನಡಕ ವಿತರಣೆ ನಡೆಯಿತು.ನೂರಾರು ಜನರು ಸೇವಾ ಶಿಬಿರದಲ್ಲಿ ಭಾಗವಹಿಸಿದ್ದರು.