ಸುಬ್ರಹ್ಮಣ್ಯ : ಚಾತುರ್ಮಾಸ್ಯ ಪ್ರಯುಕ್ತ ಯಕ್ಷಗಾನ ಬಯಲಾಟ

0

ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ಆ.28 ರಂದು ವಿದ್ಯಾಪ್ರಸನ್ನ ತೀರ್ಥ ಶ್ರೀಗಳ ಚಾತುರ್ಮಾಸ್ಯ ಪ್ರಯುಕ್ತ ಯಕ್ಷಗಾನ ಬಯಲಾಟ ನಡೆಯಿತು.

ಪದ್ಮನಾಭ ಮುಚಿಂತ್ತಾಯ ಹಾಗೂ ಯಕ್ಷಮಿತ್ರರು ಸುಬ್ರಹ್ಮಣ್ಯ ಇವರ ಪ್ರಯೋಜಕತ್ವದಲ್ಲಿ ಪುತ್ತೂರು ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿಯವರು “ದಕ್ಷಾಧ್ವರ ವೀರ” ಅಭಿಮನ್ಯು ಎಂಬ ಪ್ರಸಂಗವನ್ನು ಮಾಡಲಾಯಿತು.


ರವಿಚಂದ್ರ ಕನ್ನಡಿಕಟ್ಟೆ, ದೇವರಾಜ್ ಆಚಾರ್ಯ, ಚಿನ್ಮಯ ಕಲ್ಲಡ್ಕ, ಭಾಗವತಿಕೆಯಲ್ಲಿ ಚಂದ್ರಶೇಖರ ಸರಪಾಡಿ, ಶ್ರೀಧರ ವಿಟ್ಲ,ಜಿ.ಸುಬ್ರಹ್ಮಣ್ಯ ಮುಚಿಂತ್ತಾಯ ಚೆಂಡೆ, ಮದ್ದಳೆ, ಚಕ್ರತಾಳ ವಸಂತ ವಾಮನಪದವು ಇದ್ದರು. ಕಲಾವಿದರಾಗಿ ಹಾಸ್ಯ ಪಾತ್ರದಲ್ಲಿ ಜಯರಾಮ ಆಚಾರ್ಯ ಬಂಟ್ಟಾಳ, ಪ್ರಜ್ವಲ್ ಕುಮಾರ್, ಸ್ತ್ರೀ ಪಾತ್ರದಲ್ಲಿ ಪ್ರಶಾಂತ ಶೆಟ್ಟಿ ನೆಲ್ಯಾಡಿ, ಸತೀಶ್ ಗೌಡ ನೀರಕೆರೆ, ಚರಣ್ ಗೌಡ ಕಾಣಿಯೂರು,
ವಸಂತ ಗೌಡ, ಚಂದ್ರಶೇಖರ ಧರ್ಮಸ್ಥಳ, ಸದಾಶಿವ ಆಚಾರ್ಯ, ಕೀರ್ತನ ಕಾರ್ಕಳ, ಬಾಲಕೃಷ್ಣ ಗೌಡ, ಅರಳ ಗಣೇಶ, ಹರೀಶ ಶೆಟ್ಟಿ, ಮೋಹನ ಬೆಳ್ಳಿಪ್ಪಾಡಿ, ಶಿವಾನಂದ ಪೆರ್ಲ, ಶಿವರಾಜ್ ಬಜಕೂಡ್ಲು ಅಕ್ಷಯ ಇದ್ದರು.
ನೂರಾರು ಸಂಖ್ಯೆಯ ಯಕ್ಷಗಾನ ಆಸಕ್ತರು ಯಕ್ಷಗಾನ ವೀಕ್ಷಿಸಿದರು.