ಸುಬ್ರಹ್ಮಣ್ಯ : ಎಸ್‌ಎಸ್‌ಪಿಯು ಕಾಲೇಜಿನಲ್ಲಿ ಓಣಂ ಆಚರಣೆ

0

ಸುಬ್ರಹ್ಮಣ್ಯ ಎಸ್‌ಎಸ್‌ಪಿಯು ಕಾಲೇಜು ಮತ್ತು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ಆ‌.29 ಕಾಲೇಜಿನಲ್ಲಿ ನಡೆದ ಓಣಂ ಆಚರಣೆಯನ್ನು ದೀಪ ಬೆಳಗಿಸಿ ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ನಾಯಕ್ ಉದ್ಘಾಟಿಸಿದರು.


ಓಣಂ ಆಚರಣೆಯ ನಿಮಿತ್ತ ಕಾಲೇಜಿನಲ್ಲಿ ಎನ್‌ಎಸ್‌ಎಸ್ ಘಟಕದ ವಿದ್ಯಾರ್ಥಿಗಳು ಬೃಹತ್ ಪೂಕಳಂ ರಚಿಸಿದ್ದರು. ಸೇವಂತಿಗೆ, ಮಲ್ಲಿಗೆ, ಕನಕಾಂಬರ, ತುಳಸಿ, ಗುಲಾಬಿ, ದಾಸವಾಳ, ಗೋರಟೆ ಮೊದಲಾದ ಹೂವುಗಳನ್ನು ಬಳಸಿ ವಿದ್ಯಾರ್ಥಿಗಳು ಆಕರ್ಷಕವಾಗಿ ಹೂವಿನ ರಂಗೋಲಿ ಬಿಡಿಸಿದ್ದರು.ಈ ರಂಗೋಲಿಯ ನಡುವೆ ದೀಪವನ್ನು ಇರಿಸಲಾಗಿತ್ತು.ದೀಪ ಬೆಳಗುವ ಮೂಲಕ ಆಚರಣೆಗೆ ಕಾಲೇಜಿನ ವಿದ್ಯಾರ್ಥಿ ಸಂಘದ ಸಂಚಾಲಕ ಜಯಪ್ರಕಾಶ್ ಆರ್ ಚಾಲನೆ ನೀಡಿದರು. ಈ ಸಂದರ್ಭ ಸಂಸ್ಕೃತ ಉಪನ್ಯಾಸಕ ಡಾ.ಪ್ರಜ್ವಲ್.ಜೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮಂತ್ರಪಠಣ ಮಾಡಿದರು.


ಈ ಸಂದರ್ಭ ಸಾಂಸ್ಕೃತಿಕ ತಂಡದ ಸಂಚಾಲಕಿ ರೇಖಾರಾಣಿ ಸೋಮಶೇಖರ್, ಎನ್‌ಎಸ್‌ಎಸ್ ಯೋಜನಾಧಿಕಾರಿ ಭವ್ಯಶ್ರೀ ಹರೀಶ್ ಕುಲ್ಕುಂದ, ರೆಡ್‌ಕ್ರಾಸ್ ಸಂಯೋಜಕಿ ಶ್ರುತಿ ಯಾಲದಾಳು, ರೋವರ್ಸ್ ಮತ್ತು ರೇಂಜರ್ಸ್ ನಾಯಕ ಪ್ರವೀಣ್ ಎರ್ಮಾಯಿಲ್, ಸ್ಟಾಪ್ ಸೆಕ್ರೇಟರಿ ಗಿರೀಶ್, ಉಪನ್ಯಾಸಕರಾದ ಜಯಶ್ರೀ.ವಿ.ದಂಬೆಕೋಡಿ, ಮನೋಜ್ ಕುಮಾರ್ ಬಿ.ಎಸ್, ರತ್ನಾಕರ ಎಸ್, ಶ್ರೀಧರ್ ಪುತ್ರನ್, ಸುಧಾ, ಸೌಮ್ಯಾ, ಶ್ಯಾಮಿಲಿ, ಪೂರ್ಣಿಮಾ ಸೇರಿದಂತೆ ಎನ್‌ಎಸ್‌ಎಸ್ ಸ್ವಯಂಸೇವಕರು, ವಿದ್ಯಾರ್ಥಿಗಳು, ಸಿಬಂದಿಗಳು ಉಪಸ್ಥಿತರಿದ್ದರು.