ಶ್ರೀ ವಿಶ್ವಕರ್ಮ ಭಜನಾ ಮಂಡಳಿ ನಿಡ್ಮಾರು ಇವರಿಂದ ನಿವೃತ್ತ ಶಿಕ್ಷಕ ಬಿ. ಸುಭಾಶ್ಚಂದ್ರ ರೈಯವರಿಗೆ ಗುರುವಂದನೆ

0

ಶ್ರೀ ವಿಶ್ವಕರ್ಮ ಭಜನಾ ಮಂಡಳಿ ನಿಡ್ಮಾರು ಇವರಿಂದ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಬಿ. ಸುಭಾಶ್ಚಂದ್ರ ರೈಯವರಿಗೆ ಗುರುವಂದನೆ ಕಾರ್ಯಕ್ರಮ ಸೆ. 5ರಂದು ಸುಭಾಶ್ಚಂದ್ರ ರೈಯವರ ಮನೆಯಲ್ಲಿ ನಡೆಯಿತು.
ಮಂಡಳಿ ಅಧ್ಯಕ್ಷ ಮಧುಚಂದ್ರ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಪ್ರಭಾಕರ ರೈ, ನಿವೃತ್ತ ಮುಖ್ಯ ಶಿಕ್ಷಕ ಆರ್.ಕೆ. ಭಾಸ್ಕರ್, ಮಂಡಳಿಯ ಗೌರವ ಸಲಹೆಗಾರರಾದ ಜಯರಾಜ್ ಆಚಾರ್ಯ, ಪ್ರಮೋದ್ ಕುಮಾರ್ ಶೆಟ್ಟಿ ಕುಂಟುಪುಣಿಗುತ್ತು, ಪಿ.ಜಿ.ಎಸ್‌.ಎನ್. ಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಂಡಳಿ ಕಾರ್ಯದರ್ಶಿ ನಾರಾಯಣ ಎಂ.ಆರ್ ಕಾರ್ಯಕ್ರಮ ನಿರೂಪಿಸಿ ಸನ್ಮಾನ ಪತ್ರ ವಾಚಿಸಿ ವಂದಿಸಿದರು.

ಕೋಶಾಧಿಕಾರಿ ಶೇಷಪ್ಪ ಆಚಾರ್ಯ ಪ್ರಾರ್ಥಿಸಿದರು. ಭಜನಾ ಮಂಡಳಿಗೆ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಬಿ. ಸುಭಾಶ್ಚಂದ್ರ ರೈಯವರು ಈ ಸಂದರ್ಭದಲ್ಲಿ ದೇಣಿಗೆ ನೀಡಿದರು.

ನಿವೃತ್ತ ಮುಖ್ಯ ಶಿಕ್ಷಕಿ ಶಶಿಕಲಾ ಕೆ,
ದಿನೇಶ್ ಬಾಚೋಡಿ, ಚಿತ್ರಾ ದಿನೇಶ್ ಬಾಚೋಡಿ, ಶ್ರೀಮತಿ ಅರುಣಾ ಶೇಷಪ್ಪ ಆಚಾರ್ಯ ನಿಡ್ಮಾರು, ಮಾಧವ ಕೇರ್ಪಡ, ಹರಿನಾರಾಯಣ ಆಚಾರ್ಯ ಕಳಂಜ, ಪ್ರವೀಣ್ ಆಚಾರ್ಯ ಕಾಣಿಯೂರು, ಕು. ಆಪ್ತ ಕಾಣಿಯೂರು, ಸುಭಾಶ್ಚಂದ್ರ ರೈಯವರ ಪತ್ನಿ ಶ್ರೀಮತಿ ಕಾತ್ಯಾಯಿನಿ ಎಸ್. ರೈ, ಪುತ್ರಿ ಸಾತ್ವಿಕ ಎನ್. ರೈ, ಅಳಿಯ ನಿತಿನ್ ರೈ ಕುಕ್ಕುವಳ್ಳಿ, ಸುದ್ದಿ ಪ್ರತಿನಿಧಿ ಸಂಕಪ್ಪ ಸಾಲ್ಯಾನ್, ಸುದ್ದಿ ವರದಿಗಾರ ಈಶ್ವರ ವಾರಣಾಶಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.