ಇನ್ನರ್ ವೀಲ್ ಕ್ಲಬ್ ಹಾಗೂ ಅಂಜಲಿ ಮಾಂಟೆಸ್ಸರಿ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ

0

ಇನ್ನರ್ ವೀಲ್ ಕ್ಲಬ್ ಸುಳ್ಯ ಹಾಗೂ ಅಂಜಲಿ ಮಾಂಟೆಸರಿ ಸ್ಕೂಲ್ ಸುಳ್ಯ ಇದರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಅಂಜಲಿ ಮಾಂಟೆಸರಿ ಸ್ಕೂಲ್ ಸುಳ್ಯ ಇಲ್ಲಿ ಮುದ್ದುಕೃಷ್ಣ, ಬಾಲಕೃಷ್ಣ ಹಾಗೂ ರಾಧಾಕೃಷ್ಣ ಸ್ಪರ್ಧೆ ಗಳನ್ನು ಮಕ್ಕಳಿಗೆ ಆಯೋಜಿಸಲಾಗಿತ್ತು.

ಮುದ್ದುಕೃಷ್ಣ ವಿಭಾಗದಲ್ಲಿ ಸಾಯಿ ಸಾಧನ್ ನಾರ್ಕೊಡು ಹಾಗೂ ವರ್ಧನ್ ಇವರು ಪ್ರಥಮ ಬಹುಮಾನವನ್ನು ಪಡೆದುಕೊಂಡರು, ಅನ್ಮಯ್ ದ್ವಿತೀಯ ಬಹುಮಾನವನ್ನು ಪಡೆದುಕೊಂಡರು .

ರಕ್ಷಾ ಕುರಂಜಿಗುಡ್ಡೆ ಹಾಗೂ ಯಶ್ಮಿ ತೃತೀಯ ಸ್ಥಾನವನ್ನು ಹಂಚಿಕೊಂಡರು.
ಬಾಲಕೃಷ್ಣ ವಿಭಾಗದಲ್ಲಿ ಹೃಥ್ವಿ ಪ್ರಥಮ ಬಹುಮಾನವನ್ನು ಪಡೆದುಕೊಂಡರು .ಹರ್ಶ್ವಿ ಅಡ್ಕಾರು ದ್ವಿತೀಯ ಸ್ಥಾನವನ್ನು ಪಡೆದರು. ಪ್ರಜ್ಯೋತ್ ರವರು ತೃತೀಯ ಸ್ಥಾನವನ್ನು ಪಡೆದುಕೊಂಡರು.

6-10 ವರ್ಷದ ಒಳಗಿನ ಮಕ್ಕಳ ರಾಧಾಕೃಷ್ಣ ವಿಭಾಗದಲ್ಲಿ ಸ್ನಿಗ್ಧ ಮೋಂಟಡ್ಕ ಹಾಗೂ ಧವನ್ ದೇವರಗುಂಡ ಪ್ರಥಮ ಬಹುಮಾನವನ್ನು ಪಡೆದುಕೊಂಡರು. ಪೂರ್ವಿಕ ಹಾಗೂ ತನ್ವಿ ದ್ವಿತೀಯ ಬಹುಮಾನವನ್ನು ಪಡೆದುಕೊಂಡರು. ವಂಶಿ ಹಾಗೂ ಜನ್ಯ ತೃತೀಯ ಬಹುಮಾನವನ್ನು ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಅಂಜಲಿ ಮಾಂಟೆಸರಿ ಸ್ಕೂಲ್ ಸುಳ್ಯ ಇದರ ಸಂಚಾಲಕರಾದ ಶ್ರೀಮತಿ ಗೀತಾಂಜಲಿ ಟಿ ಜಿ ಹಾಗೂ ಇನ್ನರ್ವಿಲ್ನ ಅಧ್ಯಕ್ಷರು, ಪದಾಧಿಕಾರಿಗಳು ,ಸದಸ್ಯರುಗಳು ಉಪಸ್ಥಿತರಿದ್ದರು.