ಬೆಳ್ಳಾರೆ ಜ್ಞಾನದೀಪದಲ್ಲಿ ದಿ. ಗಂಗಾಧರ ಬೆಳ್ಳಾರೆ ಸ್ಮರಣಾರ್ಥ ತರಬೇತು ಕಾರ್ಯಕ್ರಮ

0

ಬೆಳ್ಳಾರೆ ಜೇಸಿಐ ವತಿಯಿಂದ ಖ್ಯಾತ ಮನೋ ವಿಶ್ಲೇಷಕ ದಿ. ಗಂಗಾಧರ ಬೆಳ್ಳಾರೆ ಸ್ಮರಣಾರ್ಥ ತರಬೇತು ಕಾರ್ಯಕ್ರಮ ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ನಡೆಯಿತು.

ರಾಷ್ಟ್ರೀಯ ತರಬೇತುದಾರರಾದ ಅನುರಾಧ ಕುರುಂಜಿ ಮಾತುಗಾರಿಕಾ ಕಲೆಯ ಬಗ್ಗೆ ತರಬೇತಿ ನೀಡಿದರು. ಬೆಳ್ಳಾರೆ ಜೇಸಿಐ ಅಧ್ಯಕ್ಷ ರವೀಂದ್ರನಾಥ ಶೆಟ್ಟಿ ಅಜಪಿಲ ಅಧ್ಯಕ್ಷತೆ ವಹಿಸಿದ್ದರು. ಪ್ರದೀಪ್ ಕುಮಾರ್ ರೈ ಪನ್ನೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಜ್ಞಾನದೀಪ ಸಂಸ್ಥೆಯ ಉಪನ್ಯಾಸಕ ಗಣೇಶ್ ನಾಯಕ್ ಪುತ್ತೂರು, ನಿವೃತ್ತ ಪ್ರಾoಶುಪಾಲ ಪ್ರಭಾಕರ ಕಿರಿಭಾಗ, ಬೆಳ್ಳಾರೆ ಜೇಸಿಐ ಪೂರ್ವಾಧ್ಯಕ್ಷೆ ನಿರ್ಮಲಾ ಜಯರಾಮ್ ಉಮಿಕ್ಕಳ ಉಪಸ್ಥಿತರಿದ್ದರು. ಕಾಯದರ್ಶಿ ಆನಂದ ಉಮಿಕ್ಕಳ ವಂದಿಸಿದರು.