ಹರಿಹರ ಪಲ್ಲತಡ್ಕ; ಗಾಯಗೊಂಡ ಸ್ಥಿತಿಯಲ್ಲಿದ್ದ ಹಸುವಿಗೆ ಚಿಕಿತ್ಸೆ ನೀಡಿದ ವೈದ್ಯ ವೆಂಕಟಾಚಲಪತಿ!

0

ಹರಿಹರ ಪಲ್ಲತ್ತಡ್ಕ ಗ್ರಾಮದ ಕಲ್ಲೇಮಠ ಎಂಬಲ್ಲಿ ಗಾಯಗೊಂಡ ಸ್ಥಿತಿಯಲ್ಲಿದ್ದ, ನಡೆದಾಡಲು ಆಗದ ಸ್ಥಿತಿಯಲ್ಲಿದ್ದ ಹಸುವಿಗೆ ಪಶುವೈದ್ಯಾಧಿಕಾರಿ ವೆಂಕಟಾಚಲಪತಿ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ.

ಹರಿಹರ ಪಲ್ಲತಡ್ಕ ಗ್ರಾ.ಪಂ ವತಿಯಿಂದ ನಡೆಸಲ್ಪಟ್ಟ ಉಚಿತ ರೇಬೀಸ್ ಚುಚ್ಚು ಮದ್ದು ನೀಡಲು ಆಗಮಿಸಿದ್ದ ಸಂದರ್ಭ ಗಾಯ ಗೊಂಡ ಹಸು ಇದ್ದದನ್ನು ಗಮನಕ್ಕೆ ಬಂದು ಹಸುವಿಗೆ ಚಿಕಿತ್ಸೆ ನೀಡಿದರು. ಗ್ರಾಮ ಪಂಚಾಯತ್‌ನವರು ಹಾಗು ಸ್ಥಳೀಯರು ಸಹಕರಿಸಿದರು.