![](https://sullia.suddinews.com/wp-content/uploads/2023/09/society-meeting6-1024x768.jpg)
ಸೋಣಂಗೇರಿ ಹಾಲು ಉತ್ಪಾದಕರ ಸಾಮಾನ್ಯ ಸಭೆಯು ಸೋಣಂಗೇರಿ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ
ಸೆ.25 ರಂದು ಜರುಗಿತು.
![](https://sullia.suddinews.com/wp-content/uploads/2023/09/society-meeting-1024x768.jpg)
ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹಾಲು ಉತ್ಪಾದಕರ ಒಕ್ಕೂಟದ ನಿರ್ವಹಣಾಧಿಕಾರಿ ಡಾ|ನಿರಂಜನ, ಸೋಣಂಗೇರಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಪ್ರಭಾಕರ ರೈ, ಉಪಾಧ್ಯಕ್ಷ ಸತೀಶ್ ಕೊಮ್ಮೆಮನೆ, ನಿವ್ರತ್ತ ಪ್ರಾಂಶುಪಾಲೆ ಶ್ರೀಮತಿ ತಂಗಮ್ಮ, ಸಂಘದ ಕಾರ್ಯದರ್ಶಿ ಶ್ರೀಮತಿ ಹರಿಣಾಕ್ಷಿ ಹರೀಶ್ ಸೋಣಂಗೇರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
![](https://sullia.suddinews.com/wp-content/uploads/2023/09/society-meeting2-1024x768.jpg)
ಕಾರ್ಯಕ್ರಮವು ಶ್ರೀಮತಿ ಮಲ್ಲಿಕಾ ಕುಕ್ಕಂದೂರುರವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡು ಸಂಘದ ಅಧ್ಯಕ್ಷ ಪ್ರಭಾಕರ ರೈಯವರು ದೀಪ ಬೆಳಗಿಸಿದರು.ಸಭೆಯಲ್ಲಿ 2022-23 ಹಾಗೂ 2023-24 ರೈ ವರದಿಯನ್ನು ಮಂಡನೆ ಮಾಡಲಾಯಿತು.ಒಕ್ಕೂಟದ ನಿರ್ವಹಣಾಧಿಕಾರಿಯವರು ಸಂಘದ ಲಾಭ ಮತ್ತು ಸಂಘದಿಂದ ಸದಸ್ಯರುಗಳಿಗೆ ಏನೆಲ್ಲಾ ಸೌಲಭ್ಯಗಳು ಇದೆ ಎಂಬುದನ್ನು ತಿಳಿಸಿದರು.
![](https://sullia.suddinews.com/wp-content/uploads/2023/09/society-meeting3-1024x768.jpg)
ಮಾಜಿ ಸದಸ್ಯರುಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ತಂಗಮ್ಮರವರು ನೆರವೇರಿಸಿ, ಕಾರ್ಯದರ್ಶಿ ಶ್ರೀಮತಿ ಹರಿಣಾಕ್ಷಿ ಹರೀಶ್ ಸ್ವಾಗತಿಸಿದರು, ಸಂಘದ ಉಪಾಧ್ಯಕ್ಷ ಸತೀಶ್ ಕೊಮ್ಮೆಮನೆ ವಂದಿಸಿದರು.
![](https://sullia.suddinews.com/wp-content/uploads/2023/09/society-meeting4-1024x768.jpg)
ಸಭೆಯಲ್ಲಿ ಸಂಘದ ಸದಸ್ಯರುಗಳು ಹಾಜರಿದ್ದು ಸಲಹೆ ಸೂಚನೆಗಳನ್ನು ನೀಡಿ ಸಹಕರಿಸಿದರು.
![](https://sullia.suddinews.com/wp-content/uploads/2023/09/society-meeting5-1024x768.jpg)