ಉಜಿರೆಯಲ್ಲಿ ವಾಹನ ಅಪಘಾತ

0


ಪ್ರಮೋದ್ ಆರ್. ನಾಯಕ್‌ರ ಪುತ್ರ ಪ್ರಜ್ವಲ್ ನಾಯಕ್ ಮೃತ್ಯು


ಉಜಿರೆಯ ಬೆಳಾಲು ಕ್ರಾಸ್ ಬಳಿ ಇಂದು ಮುಂಜಾನೆ ನಡೆದ ಕಾರು ಅಪಘಾತದಲ್ಲಿ ಹಿಂದೆ ಸುಳ್ಯದಲ್ಲಿ ನೇಶನಲ್ ಇನ್ಸೂರೆನ್ಸ್ ಕಂಪೆನಿ ಮೆನೇಜರ್ ಆಗಿದ್ದ ಪ್ರಮೋದ್ ಆರ್.ನಾಯಕ್‌ರವರ ಪುತ್ರ ಉದ್ಯಮಿ ಪ್ರಜ್ವಲ್ ಪಿ. ನಾಯಕ್ ಸಾವನ್ನಪ್ಪಿರುವ ದಾರುಣ ಘಟನೆ ವರದಿಯಾಗಿದೆ,
ಇಂದು ಮುಂಜಾನೆ ಪ್ರಜ್ವಲ್ ನಾಯಕ್ ಚಲಾಯಿಸುತ್ತಿದ್ದ ಬೆಂಜ್ ಕಾರು ಉಜಿರೆಯ ಬೆಳಾಲು ಕ್ರಾಸ್ ಬಳಿ ಡಿವೈಡರ್‌ಗೆ ಡಿಕ್ಕಿಯಾಗಿ, ಪ್ರಜ್ವಲ್ ಗಂಭೀರ ಜಖಂಗೊಂಡರು. ಕೂಡಲೇ ಅವರನ್ನು ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತೆಗೆ ಕೊಂಡೊಯ್ದು ದಾಖಲಿಸಲಾಯಿತೆಂದೂ, ಅಲ್ಲಿ ಅವರು ಕೊನೆಯುಸಿರೆಳೆದರೆಂದೂ ತಿಳಿದುಬಂದಿದೆ.
ಸುಳ್ಯದಲ್ಲಿ ಎನ್.ಐ.ಸಿ. ಪ್ರಬಂಧಕರಾಗಿದ್ದ ಜೇಸೀ ಪ್ರಮೋದ್ ಆರ್.ನಾಯಕ್‌ರವರು ನಿವೃತ್ತಿಯ ನಂತರ ತಮ್ಮ ಊರಾದ ಬೆಳ್ತಂಗಡಿಯಲ್ಲಿ ನೆಲೆಸಿ ಸಂತೆಕಟ್ಟೆ ಎಂಬಲ್ಲಿರುವ ಪ್ರಜ್ವಲ್ ಕಾಂಪ್ಲೆಕ್ಸ್‌ನ ಮಾಲಕರಾಗಿದ್ದಾರೆ.