ಹರೀಶ್ ರಾವ್ ಜಿಲ್ಲಾ ಛಾಯಾಗ್ರಾಹಕ ಮಾಧ್ಯಮ ಪ್ರತಿನಿಧಿಯಾಗಿ ಆಯ್ಕೆ

0

ಸೌತ್ ಕೆನರಾ ಫೋಟೋಗ್ರಾಪರ್ಸ್ ಅಸೊಸಿಯೇಷನ್ ದ ಕ ಮತ್ತು ಉಡುಪಿ ಜಿಲ್ಲೆ ಇದರ ಜಂಟಿ ಕಾರ್ಯಕಾರಿ ಸಭೆಯು ಮಂಗಳೂರಿನ ಸೈಂಟ್ ಸೆಬೆಷ್ಟಿನ್ ಹಾಲ್ ನಲ್ಲಿ ಸೆ.26 ರಂದು ಜಿಲ್ಲಾಧ್ಯಕ್ಷರಾದ ಆನಂದ ಎನ್ ಬಂಟ್ವಾಳ್ ಹಾಗೂ ಎಲ್ಲಾ ಜಿಲ್ಲಾ ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆಯಿತು.2024-25 ನೇ ಸಾಲಿನ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು. ಸುಳ್ಯ ವಲಯದ ನಿಕಟ ಪೂರ್ವ ಅಧ್ಯಕ್ಷರಾದ ಹರೀಶ್ ಪಿ ರಾವ್ ಇವರನ್ನು ಜಿಲ್ಲಾ ಛಾಯಾ ಗ್ರಾಹಕ ಮಾಧ್ಯಮ ಪ್ರತಿನಿಧಿಯಾಗಿ ಆಯ್ಕೆ ಮಾಡಲಾಯಿತು. ಈ ಸಭೆಯಲ್ಲಿ ಸುಳ್ಯ ವಲಯದ ಸ್ಥಾಪಕಧ್ಯಕ್ಷರಾದ ಗೋಪಾಲ್ ಸುಳ್ಯ, ಜಿಲ್ಲಾ ಉಪಾಧ್ಯಕ್ಷರಾದ ಲೋಕೇಶ್ ಸುಬ್ರಹ್ಮಣ್ಯ ಮತ್ತು ಸುಳ್ಯ ವಲಯದ ನೂತನ ಅಧ್ಯಕ್ಷರಾದ ದಿವಾಕರ ಮುಂಡಾಜೆ, ಕಾರ್ಯದರ್ಶಿ ದಿನೇಶ್ ಏನೆಕಲ್ಲು, ಸುಧಾಕರ ರೈ ಬೆಳ್ಳಾರೆ, ಪರಮ್, ಪದ್ಮನಾಭ ಕಲ್ಲುಗುಂಡಿ, ಜಯಪ್ರಕಾಶ್ ಚಾಕೋಟೆ, ಉಪಸ್ಥಿತರಿದ್ದರು.