ದನ ಕಳ್ಳತನದ ಆರೋಪಿಗಳಿಗೆ ನ್ಯಾಯಾಂಗ ಬಂಧನ

0


ತಿಂಗಳ ಹಿಂದೆ ಸಂಪಾಜೆಯ ಗೂನಡ್ಕದಲ್ಲಿ ವರದರಾಜ್ ಎಂಬವರ ಹಟ್ಟಿಯಿಂದ ದನ ಕಳ್ಳತನ ನಡೆಸಿದ್ದ ಆರೋಪಿಗಳನ್ನು ಸುಳ್ಯ ನ್ಯಾಯಾಲಯವು ನ್ಯಾಂಗ ಬಂಧನಕ್ಕೆ ಒಪ್ಪಿಸಿದೆ.


ಆರೋಪಿಗಳಾದ ಕೇರಳದ ಅಬ್ದುಲ್ಲ ಹಾಗೂ ಮರ್ಕಂಜದ ಕಾಯರ ಗಣೇಶ ಎಂಬವರನ್ನು ಸುಳ್ಯ ಪೋಲೀಸರು ಬಂಧಿಸಿ ಇಂದು ಸಂಜೆ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಆರೋಪಿ ಅಬ್ದುಲ್ಲ ಸುಳ್ಯ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೇರೆ ಅಪರಾಧ ಕೃತ್ಯಗಳಲ್ಲೂ ಭಾಗವಹಿಸಿದ್ದನೆನ್ನಲಾಗಿದೆ.