p>

ಚಲಿಸುತ್ತಿದ್ದ ಬಸ್ಸಿನಿಂದ ಬಿದ್ದ ಬಾಲಕ

0

ಪವಾಡಸದೃಶ ಪಾರು

ಸುಳ್ಯ ಗಾಂಧಿನಗರ ಬಳಿ ಚಲಿಸುತ್ತಿದ್ದ ಬಸ್ಸಿನಿಂದ ಬಾಲಕನೊಬ್ಬ ಬಿದ್ದು ಪವಾಡಸದೃಶ ಪಾರಾದ ಘಟನೆ ನಡೆದಿದೆ.
ಮಡಿಕೇರಿ ಕಡೆಯಿಂದ ಸುಳ್ಯ ಮಾರ್ಗವಾಗಿ ಬೆಳ್ತಂಗಡಿಗೆ ತೆರಳುತ್ತಿದ್ದ ಮದುವೆ ದಿಬ್ಬಣದ ಬಸ್ ನಿಂದ ಬಾಲಕನೊಬ್ಬ ಬಸ್ಸಿನ ಹಿಂಬದಿ ಬಾಗಿಲಿನಿಂದ ಬಿದ್ದು ಯಾವುದೇ ಅಪಾಯವಾಗದೇ ಪಾರಾಗಿದ್ದಾನೆ.
ಬಾಲಕ ಬಿದ್ದ ಕೂಡಲೇ ಬಸ್ಸಲ್ಲಿದ್ದವರೆಲ್ಲ ಬೊಬ್ಬೆ ಹೊಡೆದರು. ಚಾಲಕ ತಕ್ಷಣ ಬಸ್ ನಿಲ್ಲಿಸಿದರು. ನಂತರ ಬಾಲಕನನ್ನು ಬಸ್ಸಿಗೆ ಹತ್ತಿಸಿಕೊಂಡು ಹೋಗಲಾಯಿತು. ಬಾಲಕನಿಗೆ ಗಾಯಗಳಾಗಿರಲಿಲ್ಲ.
ಬಸ್ಸಿನಲ್ಲಿ ಇದ್ದ ಪ್ರಯಾಣಿಕರು ಬೆಳ್ತಂಗಡಿ ಮೂಲದವರೆಂದು ತಿಳಿದು ಬಂದಿದೆ.