ಗಟ್ಟಿಗಾರು : ಚಾಲಕನ‌ ನಿಯಂತ್ರಣ ತಪ್ಪಿ ಚರಂಡಿಗೆ ಇಳಿದ ದ್ವಿಚಕ್ರ ವಾಹನ

0

ನೆಲ್ಲೂರು ಕೆಮ್ರಾಜೆ ಗ್ರಾಮದ ಗಟ್ಟಿಗಾರು ಎಂಬಲ್ಲಿ ದ್ವಿಚಕ್ರ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಚರಂಡಿ ಇಳಿದ ಘಟನೆ ಇಂದು ಬೆಳಿಗ್ಗೆ ವರದಿಯಾಗಿದೆ.

ಗಟ್ಟಿಗಾರು ಶಾಲೆಯ ಸಮೀಪ ಇಳಿಜಾರು ರಸ್ತೆಯಲ್ಲಿ ವೆಂಕಪ್ಪ ನಾಯ್ಕ ಕುಕ್ಕುತಗುಂಡಿ ಎಂಬವರು ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ಬದಿಯ ಚರಂಡಿಗೆ ಬಿದ್ದಿದ್ದಾರೆ. ಪರಿಣಾಮ ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ.
ಸ್ಥಳೀಯರಾದ ಅಚ್ಚುತ ಮುಂಡೋಕಜೆ, ಗಂಗಾಧರ ಗಟ್ಟಿಗಾರು ರಿಕ್ಷಾ ಚಾಲಕ‌ ಮಣಿ ಎಲಿಮಲೆ ದ್ವಿಕ್ರ ವಾಹನವನ್ನು ಮೇಲೆತ್ತಲು ಸಹಕರಿಸಿದರು ಎಂದು ತಿಳಿದು ಬಂದಿದೆ.