ಪುತ್ತೂರು ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಹತ್ಯೆ ಪ್ರಕರಣ

0


ಸುಳ್ಯ ಪೊಲೀಸರಿಂದ ಓರ್ವ ಆರೋಪಿಯ ಬಂಧನ

ಕಲ್ಲೇಗ ಟೈಗರ್‍ಸ್ ಹುಲಿವೇಷ ಕುಣಿತ ತಂಡದ ಮುಖ್ಯಸ್ಥರಾಗಿದ್ದ ಅಕ್ಷಯ್ ಕಲ್ಲೇಗ ಇವರ ಹತ್ಯೆ ಪ್ರಕರಣದ ಓರ್ವ ಆರೋಪಿ ಬನ್ನೂರು ನಿವಾಸಿ ಮಂಜುನಾಥ್ ಯಾನೆ ಹರಿ ಎಂಬಾತನನ್ನು ಬಂಧಿಸುವಲ್ಲಿ ಸುಳ್ಯ ಪೊಲೀಸ್ ಠಾಣಾ ಉಪನೀರಿಕ್ಷಕ ಹಾಗೂ ಅವರ ತಂಡ ಯಶಸ್ವಿಯಾಗಿದೆ.

ಪ್ರಕರಣದ ಆರೋಪಿ ಮಂಜುನಾಥ್ ಘಟನೆಯ ಬಳಿಕ ತನ್ನ ತಾಯಿಗೆ ಹುಷಾರಿಲ್ಲ ಎಂದು ಹೇಳಿ ಶರತ್ ಎಂಬವರ ಕಾರನ್ನು ತರಿಸಿಕೊಂಡು ಮಡಿಕೇರಿಗೆ ತೆರೆಳಿದ್ದ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ನ.೦೭ರಂದು ಪುತ್ತೂರು ಡಿ.ವೈ.ಎಸ್.ಪಿ ಡಾ.ಗಾನ ಪಿ.ಕುಮಾರ್ ರವರು ಸುಳ್ಯ ಪೊಲೀಸ್ ಠಾಣಾ ಉಪನೀರಿಕ್ಷಕರಿಗೆ ಆರೋಪಿ ಮಂಜುನಾಥ್‌ನನ್ನು ಪತ್ತೆ ಹಚ್ಚುವಲ್ಲಿ ಕಾರ್ಯಚರಣೆ ಆರಂಭಿಸುವಂತೆ ಸೂಚಿಸಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಈರಯ್ಯ ಹಾಗೂ ಅವರ ತಂಡ ಆರೋಪಿಯ ಪತ್ತೆಗಾಗಿ ತೀವ್ರ ಶೋಧ ಕಾರ್ಯವನ್ನು ನಡೆಸಿ ರಾತ್ರೋರಾತ್ರಿ ಮಂಜುನಾಥ್‌ನನ್ನು ದಕ್ಷಿಣ ಕನ್ನಡ ಗಡಿಭಾಗ ಕೊಡಗು ಜಿಲ್ಲಾ ಪರಿಸರದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ತಂಡದಲ್ಲಿ ಠಾಣಾ ಉಪನೀರಿಕ್ಷಕ ಈರಯ್ಯ ದೂಂತೂರು, ಸಿಬ್ಬಂದಿಗಳಾದ ಉದಯ ಗೌಡ, ಅನಿಲ್, ಗಿರೀಶ್, ರಾಜು, ಮಧು ಜಿ.ಡಿ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದಾರೆ.