ಆಲೆಟ್ಟಿಯಲ್ಲಿ ನಡೆದ ಕೇರಂ ಪಂದ್ಯಾಟದ ಸಮಾರೋಪ ಸಮಾರಂಭ- ಬಹುಮಾನ ವಿತರಣೆ

0

ಆಲೆಟ್ಟಿ ಗುಂಡ್ಯ ಜನನಿ ಫ್ರೆಂಡ್ಸ್ ಕ್ಲಬ್ ಮತ್ತು ಯುವಜನ ಸಂಯುಕ್ತ ಮಂಡಳಿಯ ಆಶ್ರಯದಲ್ಲಿ ನಡೆದ ಮುಕ್ತ ಡಬಲ್ಸ್ ಮತ್ತು ಸಿಂಗಲ್ಸ್ ಕೇರಂ ಪಂದ್ಯಾಟದ ಸಮಾರೋಪ ಸಮಾರಂಭ ಕ್ಲಬ್ ಅಧ್ಯಕ್ಷ ತೀರ್ಥಕುಮಾರ್ ವಾಲ್ತಾಜೆ ಅಧ್ಯಕ್ಷತೆಯಲ್ಲಿ ನ.12 ರಂದು ನಡೆಯಿತು.

ಮುಖ್ಯ ಅತಿಥಿಗಳಾಗಿ ಆಲೆಟ್ಟಿ ಕಸ್ತೂರಿ ಬಾ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಯಶೋಧ ಕುಡೆಕಲ್ಲು , ಈಶ ಹೋಟೆಲ್ ಮಾಲಕ ವಸಂತ ಆಲೆಟ್ಟಿ ,ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ, ಕ್ಲಬ್ ಗೌರವಾಧ್ಯಕ್ಷ ಲತೀಶ್ ಗುಂಡ್ಯ ಉಪಸ್ಥಿತರಿದ್ದರು.
ಸುರೇಶ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಕೇರಂ ಪಂದ್ಯಾಟದ ಸಿಂಗಲ್ಸ್ ಪ್ರಥಮ ಬಹುಮಾನ ಸತೀಶ್ ಕನಕಮಜಲು, ದ್ವಿತೀಯ ನಾಗೇಶ್ ಮಿತ್ತಡ್ಕ, ಡಬಲ್ಸ್ ಪಂದ್ಯದಲ್ಲಿ ಶೆಡ್ಡೆ ಎ ಗಾಂಧಿನಗರ ಪ್ರಥಮ, ಬಿ.ತಂಡ ದ್ವಿತೀಯ ಬಹುಮಾನ ಪಡೆದುಕೊಂಡಿತು. ಕ್ಲಬ್ಬಿನ ಪದಾಧಿಕಾರಿಗಳು ಮತ್ತು ಸದಸ್ಯರು ಸಹಕರಿಸಿದರು.