ಬೆಳ್ಳಾರೆ ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ

0

ಕರ್ನಾಟಕ ಸರ್ಕಾರ,ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ, ಗ್ರಾಮಪಂಚಾಯತ್ ಬೆಳ್ಳಾರೆ ಗ್ರಾಮಪಂಚಾಯತ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ಬೆಳ್ಳಾರೆ ಇದರ ಆಶ್ರಯದಲ್ಲಿ ಜ್ಞಾನ ದೀಪ ಶಿಕ್ಷಣ ತರಬೇತಿ ಮತ್ತು ಅಭಿವೃದ್ಧಿ ಸಂಸ್ಥೆ ಬೆಳ್ಳಾರೆ ಇವರ ಸಹಕಾರದೊಂದಿಗೆ ಗ್ರಂಥಾಲಯ ಸಪ್ತಾಹ 3ನೇ ದಿನವಾದ ನ.16 ರಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಇವರ ಜೀವನ ಹಾಗೂ ಸಾಹಿತ್ಯಿಕ ಕೊಡುಗೆಗಳ ಬಗ್ಗೆ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ ಶಿಕ್ಷಕರಾದ ಪಿ . ಎನ್. ಭಟ್ ಇವರು ಉಪನ್ಯಾಸ ನೀಡಿದರು .

ಕಾರ್ಯಕ್ರಮದಲ್ಲಿ ಜ್ಞಾನದೀಪ ವಿದ್ಯಾ ಸಂಸ್ಥೆಯ ನಿರ್ದೇಶಕರಾದ ಉಮೇಶ್ ಮಣಿಕ್ಕಾರ ಹಾಗೂ ಅಲ್ಲಿಯ ಹಿರಿಯ ಉಪನ್ಯಾಸಕರಾದ ಅಚ್ಚುತ ಅಟ್ಲೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಮೇಶ್ ಮಣಿಕ್ಕಾರ ಸ್ವಾಗತಿಸಿ ಗ್ರಂಥಾಲಯ ಸಲಹಾ ಸಮಿತಿ ಸದಸ್ಯರಾದ ಸಂಜಯ್ ನೆಟ್ಟಾರು ಧನ್ಯವಾದ ಸಲ್ಲಿಸಿದರು . ಸಂಜೀವಿನಿ ಒಕ್ಕೂಟದ ಕೃಷಿ ಉದ್ಯೋಗ ಸಖಿ ನಿಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.