ಮಂಡೆಕೋಲು ಗ್ರಾಮ ವ್ಯಾಪ್ತಿಯಲ್ಲಿ ಆನೆ ಸಂಚಾರ ತಡೆಗೆ ಶಾಸಕರ ಮೂಲಕ ಅರಣ್ಯ ಸಚಿವರಿಗೆ ಮನವಿ

0

ಮಂಡೆಕೋಲು – ಮುರೂರು ರಸ್ತೆ ದುರಸ್ತಿಗೂ ಬೇಡಿಕೆ

ಮಂಡೆಕೋಲು‌ ಗ್ರಾಮ ವ್ಯಾಪ್ತಿಯಲ್ಲಿ ಆನೆ ಸಂಚಾರ ನಿರಂತರವಾಗಿದ್ದು, ತೋಟಕ್ಕೆ ನುಗ್ಗಿ ಕೃಷಿ‌ ಹಾನಿ ಮಾಡುವುದರಿಂದ ಕೃಷಿಕರ ನಿದ್ದೆ ಕೆಡಿಸಿದೆ. ಈ ಕುರಿತು‌ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ‌ ಮಂಡೆಕೋಲು ಗ್ರಾಮ ಪಂಚಾಯತ್ ವತಿಯಿಂದ ಶಾಸಕಿ ಕು.ಭಾಗೀರಥಿ ಮುರುಳ್ಯ ರ ಮೂಲಕ ಅರಣ್ಯ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಶಾಸಕರು ಪೂರಕವಾಗಿ ಸ್ಪಂದನೆ ನೀಡಿರುವುದಾಗಿ ತಿಳಿದುಬಂದಿದೆ.

ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷ ಕುಶಲ ಉದ್ದಂತಡ್ಕ, ಉಪಾಧ್ಯಕ್ಷೆ ಪ್ರತಿಮಾ ಹೆಬ್ಬಾರ್, ಮಾಜಿ ಉಪಾಧ್ಯಕ್ಷ ಅನಿಲ್ ತೋಟಪ್ಪಾಡಿ, ಸದಸ್ಯ ಬಾಲಚಂದ್ರ ದೇವರಗುಂಡ ಇದ್ದರು.

ಮಂಡೆಕೋಲು – ಮುರೂರು ರಸ್ತೆ ಅಭಿವೃದ್ಧಿ ಗೂ ಬೇಡಿಕೆ ಸಲ್ಲಿಸಲಾಯಿತು.

ಅಲ್ಲದೆ ಅರಣ್ಯ ಸಚಿವರಿಗೆ ಪಂಚಾಯತ್ ನಿಂದ ಅಂಚೆ ಮೂಲಕವೂ ಮನವಿ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.