ಮಗನಿಂದಲೇ ತಂದೆ ತಾಯಿಯ ಮೇಲೆ ಕತ್ತಿಯಿಂದ ಹಲ್ಲೆ

0

ಕೊಡಿಯಾಲದಲ್ಲಿ ನಡೆದ ಘಟನೆ

ಗಾಯಾಳುಗಳು ಆಸ್ಪತ್ರೆಗೆ

ಕೊಡಿಯಾಲ ಗ್ರಾಮದ ಕಲ್ಪಣೆಯಲ್ಲಿ ಮಗನೇ ತಂದೆ ತಾಯಿ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ನ.20 ರಂದು ರಾತ್ರಿ ವರದಿಯಾಗಿದೆ.
ಕೊಡಿಯಾಲ ನಿವಾಸಿಗಳಾದ ಮಂಜುನಾಥ್, ಧರ್ಮಾವತಿ ಗಾಯಗೊಂಡ ದಂಪತಿಗಳು ಎಂದು ತಿಳಿದುಬಂದಿದೆ. ಮಗ ದೇವಿ ಪ್ರಸಾದ್ ಎಂಬಾತ ಕುಡಿದ ಮತ್ತಿನಿಂದ ಜಾಗದ ವಿಚಾರವಾಗಿ ತಕರಾರು ಎದ್ದು ತಂದೆ ತಾಯಿಯ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಗಂಭೀರ ಗಾಯಗೊಂಡಿರುವ ಗಾಯಾಳುಗಳನ್ನು ಮಂಗಳೂರು ಆಸ್ಪತ್ರೆಗೆ ಚಿಕಿತ್ಸೆಗೆ ಕೊಂಡಯ್ಯಲಾಗಿದೆ ಎಂದು ತಿಳಿದುಬಂದಿದೆ.