ಎಂ.ಎಸ್ಸಿ ಸೈಕಾಲಜಿಯಲ್ಲಿ ಸಾವಿತ್ರಿ ಬಿ.ಯವರಿಗೆ ಡಿಸ್ಟಿಂಕ್ಷನ್

0


ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರಿನಲ್ಲಿ ಎಂ.ಎಸ್ಸಿ ಸೈಕಾಲಜಿ ವಿಭಾಗದಲ್ಲಿ ಶ್ರೀಮತಿ ಸಾವಿತ್ರಿ ಬಿ.ಯವರು ಡಿಸ್ಟಿಂಕ್ಷನ್‌ನೊಂದಿಗೆ ಉತ್ತೀರ್ಣರಾಗಿದ್ದಾರೆ.

ಪ್ರಸ್ತುತ ಕಾರ್ಮಿಕ ಇಲಾಖೆಯ ವಿಮಾ ಚಿಕಿತ್ಸಾಲಯ ಪುತ್ತೂರಿನಲ್ಲಿ ನರ್ಸಿಂಗ್ ಆಫೀಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಕಳೆದ ೨೦ ವರ್ಷಗಳಿಂದ ಕಾರ್ಮಿಕ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ತನ್ನ ಸೇವಾವಧಿಯಲ್ಲಿಯೇ ೨೦೧೯ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಪದವಿಯನ್ನು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ ಹೊಂದಿ, 2020 ರಲ್ಲಿ ಮಾನಸ ಎಜ್ಯುಕೇಶನ್ ಫೌಂಡೇಶನ್ ಫಾರ್ ಮೆಂಟಲ್ ಹೆಲ್ತ್ ಶಿವಮೊಗ್ಗ ಇಲ್ಲಿ ಪೋಸ್ಟ್ ಗ್ರಾಜ್ಯುಯೇಟ್ ಡಿಪ್ಲೋಮಾ ಇನ್ ಸೈಕಾಲಜಿಕಲ್ ಕೌನ್ಸಿಲ್ & ಗೈಡೆನ್ಸ್‌ನಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು.
ಪ್ರಸ್ತುತ ಇವರು ಸುಳ್ಯದ ದೇವಸ್ಯ ನಿವಾಸಿ. ಉಬರಡ್ಕ ಮಿತ್ತೂರಿನ ದಿ. ಲಿಂಗಪ್ಪ ಗೌಡ ಬೈತಡ್ಕ ಹಾಗೂ ಶ್ರೀಮತಿ ಶೇಷಮ್ಮ ದಂಪತಿಗಳ ಪುತ್ರಿ.