ಎಡಮಂಗಲ : ಸಾಯಿ ಮೆಡಿಕಲ್ಸ್ ಶುಭಾರಂಭ, ಶಾಸಕರಿಂದ ಉದ್ಘಾಟನೆ

0

ಎಣ್ಮೂರುಗೂತ್ತು ಭಾರತಿ ರಘುಪ್ರಸಾದ್ ಶೆಟ್ಟಿಯವರ ಮಾಲಕತ್ವದ ಸಾಯಿ ಮೆಡಿಕಲ್ಸ್ ಡಿ. ೨ರಂದು ಎಡಮಂಗಲ ಕೆ.ಜೆ.ಜಿ ಬಿಲ್ಡಿಂಗ್ ನಲ್ಲಿ ಶುಭಾರಂಭಗೊಂಡಿತ್ತು. ಶಾಸಕಿ ಕು. ಭಾಗಿರಥಿ ಮುರುಳ್ಯರವರು ರಿಬ್ಬನ್ ಕಟ್ ಮಾಡಿ ಉದ್ಘಾಟನೆ ಮಾಡಿದರು.

ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷೆ ಶ್ರೀಮತಿ ಶುಭಾದ .ಎಸ್ ರೈ ಯವರು ದೀಪ ಪ್ರಜ್ವಲನೆ ಮಾಡಿದರು, ಈ ಸಂದರ್ಭದಲ್ಲಿ ಶ್ರೀಮತಿ ಕಲ್ಯಾಣಿ ವಿಠಲಾ ಶೆಟ್ಟಿ ಏಳ್ನಾಡ್‌ಗುತ್ತು, ಕೇರ್ಪಡ ಮಹಿಷಾಮರ್ಧಿನಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಸಂತ ನಡುಬೈಲು , ಮುರುಳ್ಯ ಎಣ್ಮೂರು ಸೊಸೈಟಿ ಅಧ್ಯಕ್ಷೆ ಶ್ರೀಮತಿ ಕುಸುಮಾವತಿ ರೈ ಎಣ್ಮೂರು ಗುತ್ತು ಪಂಜಿಮೊಗರು ರಘುನಾಥ ರೈ , ಎನ್ .ಜಿ ಪ್ರಭಾಕರ ರೈ ,ಎನ್. ಜಿ ಲೋಕನಾಥ ರೈ , ಅರ್ಚನ ರಾಜೇಶ್ ರೈ , ವಜ್ರ ದೀಕ್ಷಿತ್ ರೈ, ಕುಂಞಣ್ಣ ರೈ ಎಣ್ಮೂರು ಗುತ್ತು, ಗೋಪಾಲಕೃಷ್ಣ ರೈ ಎಣ್ಮೂರು ಗುತ್ತು, ಕಾಂಪ್ಲೆಕ್ಸ್ ಮೂಲಕ ಉಮೇಶ್ ಜತ್ತಪ್ಪ ಗೌಡ, ಸುಮಂತ್ ಅಲೆಕ್ಕಾಡಿ, ಸಂತೋಷ್ ಪರಪ್ಪು ಹಾಗೂ ಇನ್ನಿತರರು ಉಪಸ್ಥಿತರಿದ್ದರು, ಎಲ್ಲರನ್ನೂ ಮಾಲಕರು ಬರಮಾಡಿಕೊಂಡು ಸ್ವಾಗತಿಸಿ ವಂದಿಸಿದರು.