ಅರಂತೋಡು ವಲಯದ ಯುವಕ-ಯುವತಿ ಮಂಡಲಗಳ ತರಬೇತಿ ಕಾರ್ಯಗಾರದ ಕುರಿತು ಪೂರ್ವಭಾವಿ ಸಭೆ

0

ಸುಳ್ಯ ಯುವಜನ ಸಂಯುಕ್ತ ಮಂಡಳಿಯ ವತಿಯಿಂದ ಸ್ಪಂದನ ಗೆಳೆಯರ ಬಳಗ (ರಿ.) ಅಡ್ತಲೆ ಇದರ ಆಶ್ರಯದಲ್ಲಿ ಡಿ.೧೭ ರಂದು ಅರಂತೋಡು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿರುವ ಅರಂತೋಡು ವಲಯದ ಯುವಕ ಯುವತಿ ಮಂಡಲಗಳ ಒಂದು ದಿನದ ತರಬೇತಿ ಕಾರ್ಯಾಗಾರ ನಡೆಸುವ ಕುರಿತು ಪೂರ್ವಭಾವಿ ಸಭೆಯು ಡಿ.೧೦ ರಂದು ಅರಂತೋಡು ಸಿರಿಸೌಧ ಸಭಾಂಗಣದಲ್ಲಿ ನಡೆಯಿತು.


ಯುವಜನ ಸಂಯುಕ್ತ ಮಂಡಳಿಯ ನಿರ್ದೇಶಕರಾದ ಸುಬ್ರಮಣಿ ಪಿ.ವಿ. ಹಾಗೂ ಲೋಹಿತ್ ಬಾಳಿಕಳ ಕಾರ್ಯಾಗಾರದ ಕುರಿತು ಮಾಹಿತಿ ನೀಡಿದರು. ಸಭೆಯಲ್ಲಿ ಗ್ರಾಮ ಪಂಚಾಯಿತ್ ಅಧ್ಯಕ್ಷರಾದ ಕೇಶವ ಅಡ್ತಲೆ, ಸ್ಪಂದನ ಗೆಳೆಯರ ಬಳಗದ ಅಧ್ಯಕ್ಷ ವಿನಯ್ ಕುಮಾರ್ ಬೆದ್ರುಪಣೆ ಹಾಗೂ ಅರಂತೋಡು ವ್ಯಾಪ್ತಿಯ ಎಲ್ಲಾ ಯುವಕ ಮಂಡಲಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದರು.