ಪೆರಾಜೆ: ಜ್ಯೋತಿ ಪ್ರೌಢಶಾಲೆಗೆ ಅಭಿನಂದನಾ ಫಲಕ

0

2022-23 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡ 100 ಫಲಿತಾಂಶ ಪಡೆದ ಕನ್ನಡ ಮಾಧ್ಯಮ ಶಾಲೆಗಳಿಗೆ ನೀಡುವ ಅಭಿನಂದನಾ ಫಲಕವನ್ನು ಪೆರಾಜೆ ಜ್ಯೋತಿ ಪ್ರೌಢಶಾಲೆಗೆ ದಿ. ಕುಂಬಳೆ ಸುಬ್ಬಯ್ಯ ಪ್ರಭುರವರ ಕುಟುಂಬದವರು ಇಂದು ನೀಡಿದರು.
ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್, ಜುಬಿಲಿ ಎಜುಕೇಶನ್ ಫಂಡ್ ಬೆಂಗಳೂರು, ನ್ಯಾಯಮೂರ್ತಿ ದಿ.ಅಮ್ಮೆಂಬಳ ನಾರಾಯಣ ಪೈ ರವರ ಸ್ಮರಣಾರ್ಥ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಭಾಷಾ ವಿಷಯದಲ್ಲಿ 125 ಕ್ಕೆ 125 ಅಂಕ ಪಡೆದ ವಿದ್ಯಾರ್ಥಿಗಳಿಗೆ ನೀಡುವ ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆಯಾದ ಶಾಲೆಯ ವಿದ್ಯಾರ್ಥಿನಿಯರಾದ ಭಾಗ್ಯಶ್ರೀ ಕೆ. ಡಿ. ಹಾಗೂ ಭಾವನಾ ಕೆ.ಕೆ. ರವರಿಗೆ ಪುರಸ್ಕಾರ ನೀಡಲಾಯಿತು.