ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಂಭ್ರಮದ ಚಂಪಾಷಷ್ಠಿ ಮಹೋತ್ಸವ

0

ಬ್ಯಾಂಡ್ ವಾಲಗದ ಅಬ್ಬರದೊಂದಿಗೆ ರಥಾರೂಢನಾದ ಸುಬ್ರಮಣ್ಯ ದೇವರು

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಂಭ್ರಮದ ಚಂಪಾಷಷ್ಠಿ ಮಹೋತ್ಸವ ಕಾರ್ಯಕ್ರಮ ಇಂದು ಬೆಳಿಗ್ಗೆ ನಡೆಯಿತು.

ಇಂದು ಬೆಳಿಗ್ಗೆ 7.33ರ ಧನುರ್ ಲಗ್ನದ ಸುಮೂಹೂರ್ತದಲ್ಲಿ ಸಹಸ್ರಾರು ಜನ ಸಮೂಹದ ಮಧ್ಯೆ ಕುಕ್ಕೆ ಸುಬ್ರಹ್ಮಣ್ಯ ದೇವರು ಬ್ರಹ್ಮ ರಥವನ್ನೇರಿದರು. ಬ್ರಹ್ಮರಥರೂಢರಾದ ಸುಬ್ರಹ್ಮಣ್ಯ ದೇವರು ರಾಜ ಗೋಪುರದ ಬಳಿಯಿಂದ ಹೊರಟು ರಾಜಬೀದಿಯಲ್ಲಿ ಸಾಗಿ ಬಂತು.

ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾದಿಗಳು ಬ್ರಹ್ಮರಥೋತ್ಸವವನ್ನು ಕಣ್ತುಂಬಿಕೊಂಡರು.

ಕಾರ್ಯಕ್ರಮವು ಸುದ್ದಿ ಯೂಟ್ಯೂಬ್ ಚಾನೆಲ್ ನಲ್ಲಿ ನೇರ ಪ್ರಸಾರವಾಗುತ್ತಿದೆ. ನೇರ ಪ್ರಸಾರವನ್ನು ವೀಕ್ಷಿಸಲು ಈ ಲಿಂಕನ್ನು ಕ್ಲಿಕ್ಕಿಸಿ…..