ಸುಳ್ಯ ಕ್ರೈಸ್ತ ಅಲ್ಪಸಂಖ್ಯಾತರ ಸಹಕಾರಿ ಸಂಘದಿಂದ ಜಿಲ್ಲಾ ರಾಜ್ಯೊತ್ಸವ ಪ್ರಶಸ್ತಿ ಪುರಸ್ಕೃತ ಕೆ.ಟಿ.ವಿಶ್ವನಾಥರಿಗೆ ಸನ್ಮಾನ- ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ

0

ಸುಳ್ಯ ಕ್ರೈಸ್ತ ಅಲ್ಪಸಂಖ್ಯಾತರ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ ದ.ಕ.ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ವೆಂಕಟರಮಣ ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ‌.ವಿಶ್ವನಾಥರಿಗೆ ಸನ್ಮಾನ ಕಾರ್ಯಕ್ರಮ ಡಿ.18ರಂದು ನಡೆಯಿತು.


ಸಂಸ್ಥೆಯ ಆಡಳಿತ ಮಂಡಳಿ ಸಭೆಯಲ್ಲಿ ಈ ಸನ್ಮಾನವನ್ನು ಸಂಘದ ಅಧ್ಯಕ್ಷರಾದ ಬಿಟ್ಟಿ ಬಿ.ನೆಡುನಿಲಂ ಮತ್ತು ಉಪಾಧ್ಯಕ್ಷರಾದ ಜೋನ್ ವಿಲಿಯಂ ಲಸ್ರಾದೋರವರು ನೆರವೇರಿಸಿದರು‌.


ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಳಾದ ಕೆ.ಎಂ.ಜಾರ್ಜ್, ಲಿಜೋ ಜೋಸ್ ,ಮೈಕಲ್ ಫ್ರಾನ್ಸಿಸ್ ಪಾಯಸ್, ಒವಿನ್ ಜಿ.ಎಲ್. ಪಿಂಟೋ, ಶ್ರೀಮತಿ ಸುನಿತಾ ಎಂ ಡಿಸೋಜಾ, ಕ್ಲೇವಿಯರ್ ರಾಜು ,ಎಂ ಟಿ ಥೋಮಸ್, ಶ್ರೀಮತಿ ಮಿನಿ ನೆಲ್ಸನ್, ಲೂವಿಸ್ ಲೋಬೋ, ಡೇವಿಡ್ ಧೀರಾ ಕ್ರಾಸ್ತಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಿತ್ ಪಿ.ಜಿ. ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕೆ. ಟಿ. ವಿಶ್ವನಾಥ್ ರವರು ಕ್ರಿಸ್ಮಸ್ ಕೇಕ್ ಕಟ್ ಮಾಡಿದರು. ಸಂಘದ ವಾರ್ಷಿಕ ಕ್ಯಾಲೆಂಡರ್ ನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.