ಪ್ರಮುಖ ನಾಯಕ ರಾಧಾಕೃಷ್ಣ ಬೊಳ್ಳೂರು ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖ ಬಿ.ಜೆ.ಪಿ.ಯಿಂದ ಕಾಂಗ್ರೆಸ್ ಸೇರ್ಪಡೆ

0

ಸುಳ್ಯ ರಾಜಕೀಯ ರಂಗದ ಪ್ರಮುಖ ನಾಯಕರಲ್ಲೊಬ್ಬರಾದ ರಾಧಾಕೃಷ್ಣ ಬೊಳ್ಳೂರುರವರು ಇಂದು ಸಂಜೆ ಮಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರಿದರು. ಅವರು ನಿನ್ನೆಯಷ್ಟೇ ಬಿ.ಜೆ.ಪಿ. ಪ್ರಾಥಮಿಕ ಸದಸ್ಯತ್ವಕ್ಕೆ ಮತ್ತು ಜಿಲ್ಲಾ ಬಿ.ಜೆ.ಪಿ. ರೈತಮೋರ್ಚಾ ಅಧ್ಯಕ್ಷ ಸ್ಥಾನಕ್ಕೆರಾಜೀನಾಮೆ ನೀಡಿದ್ದರು.


ಮಾಜಿ ಸಚಿವ ರಮಾನಾಥ ರೈ, ಸುಳ್ಯ ವಿಧಾನಸಭಾ ಕ್ಷೇತ್ರ ಉಸ್ತುವಾರಿಯಾದ ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಮಮತಾ ಗಟ್ಟಿ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ್ ಮತ್ತಿತರರ ಸಮ್ಮುಖದಲ್ಲಿ ರಾಜ್ಯದ ಆರೋಗ್ಯ ಸಚಿವರು ಹಾಗೂ ದ.ಕ.ಜಿಲ್ಲಾ ಉಸ್ತುವಾರಿಯಾದ ದಿನೇಶ್ ಗುಂಡೂರಾವ್ ರವರು ರಾಧಾಕೃಷ್ಣ ಬೊಳ್ಳೂರುರನ್ನು ಕಾಂಗ್ರೆಸ್ ಶಾಲು ತೊಡಿಸಿ, ಮಾಲಾರ್ಪಣೆಗೈದು ಕಾಂಗ್ರೆಸ್ಸಿಗೆ ಸ್ವಾಗತಿಸಿದರು.


ಬಳಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬೊಳ್ಳೂರು, ತಾನೇಕೆ ಬಿ.ಜೆ.ಪಿ. ತೊರೆಯಬೇಕಾಗಿ ಬಂತೆಂದು ವಿವರಿಸಿದರು.