ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಅಯೋಧ್ಯೆಯ ಮಂತ್ರಾಕ್ಷತೆ ವಿತರಣೆ

0

ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಮಂತ್ರಾಕ್ಷತೆ ವಿತರಣೆ ಕಾರ್ಯಕ್ರಮವು ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜ.01 ರಂದು ನಡೆಯಿತು.


ದೇವಸ್ಥಾನದ ಪ್ರಧಾನ ಅರ್ಚಕ ಪದ್ಮನಾಭ ಭಟ್ ಪೂಜಾ ಕಾರ್ಯ ನೆರವೇರಿಸಿದರು. ಡಾ.ಬಾಲಸುಬ್ರಹ್ಮಣ್ಯ ಭಟ್ ರವರು ಗ್ರಾಮದ ಎಲ್ಲಾ ವಾರ್ಡ್ ಗಳಿಗೆ ಮಂತ್ರಾಕ್ಷತೆ ವಿತರಣೆ ಮಾಡಿದರು.


ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತಾಧಿಕಾರಿ ಶ್ಯಾಮ್ ಪ್ರಸಾದ್, ಐವರ್ನಾಡು ಪ್ರಾ.ಕೃ.ಪತ್ತಿನ ಸ.ಸಂಘದ ಅಧ್ಯಕ್ಷ ಎಸ್.ಎನ್ ಮನ್ಮಥ , ದೇವಸ್ಥಾನದ ವ್ಯ.ಸ.ಮಾಜಿ ಅಧ್ಯಕ್ಷ ಶ್ರೀನಿವಾಸ ಮಡ್ತಿಲ,ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಲೀಲಾವತಿ ಕುತ್ಯಾಡಿ,ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ,ಸದಸ್ಯೆ ಸುಜಾತ ಪವಿತ್ರಮಜಲು,ಸಹಕಾರಿ ಸಂಘದ ಉಪಾಧ್ಯಲ್ಷ ವಿಕ್ರಂ ಪೈ,ಮಾಧವ ಭಟ್ ಶೃಂಗೇರಿ,ಮಹೇಶ್ ಜಬಳೆ,ಬಾಲಕೃಷ್ಣ ಮಡ್ತಿಲ,ಸತೀಶ ಎಡಮಲೆ,ಬೆಳ್ಯಪ್ಪ ಗೌಡ ಮಡ್ತಿಲ,ಕುಸುಮಾಧರ ಮಡ್ತಿಲ,ಅವಿನ್ ಬೇಂಗಮಲೆ,ದೇವಿಪ್ರಸಾದ್ ಕೊಪ್ಪತ್ತಡ್ಕ,ಶಾಂತಾರಾಮ ಕಣಿಲೆಗುಂಡಿ,ದಾಸಪ್ಪ ಕೋಡ್ತೀಲು,ವಿನಯ ಕೋಡ್ತೀಲು,ವೆಂಕಪ್ಪ ಜಬಳೆ,ವಾಸುದೇವ ಬೊಳುಬೈಲು,ರವಿನಾಥ ಮಡ್ತಿಲ,ಚಂದ್ರಶೇಖರ ಕೊಯಿಲ,ಸಂಪ್ರೀತ್ ಮಿತ್ತಮೂಲೆ,ದೇವಿದಾಸ ಕತ್ಲಡ್ಕ,ದಯಾನಂದ ಚೆಮ್ನೂರು ,ಪ್ರಭಾಕರ ಕುತ್ಯಾಡಿ, ಯಶವಂತ ಬಾರೆತ್ತಡ್ಕ ಮತ್ತಿತರರು ಉಪಸ್ಥಿತರಿದ್ದರು.