ಪಂಜ: ಪ್ರತಿಷ್ಠಾ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಶ್ರೀ ರಕ್ತೇಶ್ವರಿ ಹಾಗೂ ಪರಿವಾರ ದೈವಗಳ ದೈವಸ್ಥಾನ ನೆಕ್ಕಿಲ ಪಂಜ ಇದರ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ದೈವಗಳ ನೇಮೋತ್ಸವ ಜ.15 ರಂದು ಜರುಗಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು.


ಪೈಂದೋಡಿ ಶ್ರೀ ಸುಬ್ರಾಯ ದೇವಾಲಯದ ಪ್ರದಾನ ಅರ್ಚಕ ವಿಷ್ಣು ಪೈಂದೋಡಿ ರವರು ಆಮಂತ್ರಣ ಪತ್ರಿಕೆ ಬಿಡುಗಡೆ ಗೊಳಿಸಿದರು. ಕಾರ್ಯಕ್ರಮದಲ್ಲಿ ಶೇಖರ ನೆಕ್ಕಿಲ ರವರು ಸಭಾಧ್ಯಕ್ಷತೆ ವಹಿಸಿದ್ದರು. ಉತ್ಸವ ಸಂಚಾಲಕ ಚಿನ್ನಪ್ಪ ಸಂಕಡ್ಕ, ದೇವಿಪ್ರಸಾದ್ ಜಾಕೆ, ಪುರುಷೋತ್ತಮ ನೆಕ್ಕಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಗಂಗಾಧರ ಗುಂಡಡ್ಕ , ಕೆಂಚಪ್ಪ ನೆಕ್ಕಿಲ, ಶ್ರೀಮತಿ ಪುಷ್ಪಾ ಕಾನತ್ತೂರ್, ಶ್ರೀಮತಿ ಹರಿಣಾಕ್ಷಿ ಸಂಕಡ್ಕ, ಭವಾನಿ ನೆಕ್ಕಿಲ, ಶ್ರೀಮತಿ ರತ್ನಾವತಿ , ಬಾಲಪ್ಪ ಗೌಡ ಸಂಕಡ್ಕ,ರುಕ್ಮಯ್ಯ ಸಂಪ, ಆನಂದ ದೇರಾಜೆ, ರತ್ನಾವತಿ ಸಂಕಡ್ಕ, ಭಗವಾನ್ ಪ್ರಸಾದ್ , ಶ್ರೀಮತಿ ಜಾನಕಿ ಕೆಮ್ಮೂರು, ರಕ್ಷಿತ್ ನೆಕ್ಕಿಲ, ಸುನೀಲ್ ತೋಟ ,ಕೇಶವ ಚೊಟ್ಟೆಮಜಲು, ಕಿರಣ್ ಕರಿಕ್ಕಳ,ರವಿ ದೇರಾಜೆ , ಶ್ರೀಮತಿ ಚಂದ್ರಾವತಿ, ರಾಜೇಶ್, ಹರೀಶ್ ನೆಕ್ಕಿಲ ಮೊದಲಾದವರು ಉಪಸ್ಥಿತರಿದ್ದರು.