ಬಂಟರ ಸಮಾವೇಶದ ಪ್ರಯುಕ್ತ ಆದರ್ಶ ಕೃಷಿಕ ಮೊರಂಗಲ್ಲು ರಾಮದಾಸ್ ರೈ ಅವರಿಗೆ ಸನ್ಮಾನ

0

ಸುಳ್ಯ ತಾಲೂಕು ಬಂಟರ ಯಾನೆ ನಾಡವರ ಸಂಘದ ವತಿಯಿಂದ ತಾಲೂಕು ಬಂಟರ ಸಮಾವೇಶವು ಡಿ.31ರಂದು ಸುಳ್ಯದ ಬಂಟರ ಭವನದಲ್ಲಿ ಜರುಗಿದ್ದು, ಜ.2ರಂದು ಆಲೆಟ್ಟಿ ಗ್ರಾಮದ ಮೊರಂಗಲ್ಲಿನ ಆದರ್ಶ ಕೃಷಿಕ ರಾಮದಾಸ್ ರೈ ಮೊರಂಗಲ್ಲು ಅವರನ್ನು ಅವರ ಮನೆಗೆ ತೆರಳಿ ಸನ್ಮಾನಿಸಿ, ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಜಯಪ್ರಕಾಶ್ ರೈ, ಅರಂತೋಡು ವಲಯಾಧ್ಯಕ್ಷ ದಯಾಕರ ರೈ, ಬಂಟರ ಭವನದ ಕಾರ್ಯಾಲಯ ಕಾರ್ಯದರ್ಶಿ ಕುಸುಮಾಧರ ರೈ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಉಮಾ ರೈ ಉಪಸ್ಥಿತರಿದ್ದರು.