ಪಂಜ: ವರ್ಷಾವಧಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಜ.24.: ಗೊನೆ ಕಡಿಯುವುದು, ಫೆ.1: ಧ್ವಜಾರೋಹಣ

ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಜ.3 ರಂದು ನಡೆಯಿತು.

ದೇವಳದ ಆಡಳಿತ ಅಧಿಕಾರಿ , ತಹಶೀಲ್ದಾರ್ ಜಿ.
ಮಂಜುನಾಥ್, ಉತ್ಸವ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ಉತ್ಸವ ಸಮಿತಿ ಸದಸ್ಯರು ಹಾಗೂ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರಾದ ಬಾಲಕೃಷ್ಣ ಗೌಡ ಕುದ್ವ,ಗಂಗಾಧರ ಗುಂಡಡ್ಕ,

ಉತ್ಸವ ಸಮಿತಿ ಸದಸ್ಯರಾದ ಧರ್ಮಪಾಲ ಗೌಡ ಕಾಚಿಲ, ಶ್ರೀಮತಿ ಪವಿತ್ರ ಕುದ್ವ ಮಲ್ಲೆಟಿ,ಕೇಶವ ಕುದ್ವ, ಸಂತೋಷ್ ರೈ ಪಲ್ಲತ್ತಡ್ಕ, ಅಶ್ವಿನ್ ಬಾಬ್ಲುಬೆಟ್ಟು, ನಾರಾಯಣ ನಾಯ್ಕ ಚಾಳೆಗುಳಿ, ಧರ್ಮಪಾಲ ಕಕ್ಯಾನ , ಶ್ರೀಮತಿ ಪುಷ್ಪಾ ಡಿ.ಪ್ರಸಾದ್ ಕಾನತ್ತೂರ್, ದೇವಳದ ಸಿಬ್ಬಂದಿಗಳು,ಭಕ್ತಾದಿಗಳು ಉಪಸ್ಥಿತರಿದ್ದರು.

ದೇವಳದಲ್ಲಿ ಪ್ರಾರ್ಥನೆ ಸಲ್ಲಿಸಿ ಆಮಂತ್ರಣ ಪತ್ರಿಕೆ ಬಿಡುಗಡೆ ಗೊಳಿಸಲಾಯಿತು.
ಅರ್ಚಕ ರಾಮಚಂದ್ರ ಭಟ್ ಪ್ರಾರ್ಥಿಸಿದರು.

ಜ.24 ರಂದು ಗೊನೆ ಕಡಿಯುವುದು. ಫೆ.1 ರಂದು ರಾತ್ರಿ ಧ್ವಜಾರೋಹಣ ಫೆ.5 ರಂದು ಹಗಲು ದರ್ಶನ ಬಲಿ,ಫೆ.6. ರಂದು ರಾತ್ರಿ ಬ್ರಹ್ಮರಥೋತ್ಸವ ನಡೆಯಲಿದೆ.