ಸುಳ್ಯ ಸಿ.ಎ. ಬ್ಯಾಂಕ್

0

ಅಧ್ಯಕ್ಷರಾಗಿ ವಿಕ್ರಂ ಅಡ್ಪಂಗಾಯ – ಉಪಾಧ್ಯಕ್ಷರಾಗಿ ಚಂದ್ರಶೇಖರ ನಡುಮನೆ ಅವಿರೋಧ ಆಯ್ಕೆ

ಅಧ್ಯಕ್ಷ – ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಯಿಂದ ದೂರ ಉಳಿದ ನಿರ್ದೇಶಕ ಎನ್.ಎ.ರಾಮಚಂದ್ರ

ಸುಳ್ಯ‌ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಸಿ.ಎ. ಬ್ಯಾಂಕ್) ಇದರ ಅಧ್ಯಕ್ಷರಾಗಿ ವಿಕ್ರಂ ಅಡ್ಪಂಗಾಯ ಹಾಗೂ ಉಪಾಧ್ಯಕ್ಷರಾಗಿ ನ್ಯಾಯವಾದಿ ಚಂದ್ರಶೇಖರ ನಡುಮನೆ ಆಯ್ಕೆಯಾಗಿದ್ದಾರೆ.

ಅಧ್ಯಕ್ಷತೆಗೆ ವಿಕ್ರಂ ಅಡ್ಪಂಗಾಯರನ್ನು ಬಾಲಗೋಪಾಲ ಸೇರ್ಕಜೆ ಸೂಚಿಸಿದರೆ ಉಪಾಧ್ಯಕ್ಷತೆಗೆ ಚಂದ್ರಶೇಖರ ನಡುಮನೆ ಯವರನ್ನು ನಿರ್ದೇಶಕ ಕೇಶವ ಸಿ.ಎ. ಸೂಚನೆ ಮಾಡಿದರು.

ಆಯ್ಕೆ ಪ್ರಕ್ರಿಯೆಯನ್ನು ಚುನಾವಣಾ ಅಧಿಕಾರಿ ಸಹಕಾರ ಸಂಘಗಳ ಅಧಿಕಾರಿ ಶಿವಲಿಂಗಯ್ಯರು‌ ನಡೆಸಿಕೊಟ್ಟರು. ಸುಳ್ಯ ಸಿ.ಎ.ಬ್ಯಾಂಕ್ ಸಿ.ಇ. ಒ ಸುದರ್ಶನ ಸೂರ್ತಿಲ ಸಹಕರಿಸಿದರು.

ನೂತನ ಬಾಲಗೋಪಾಲ ಸೇರ್ಕಜೆ, ಚಂದ್ರಶೇಖರ ಡಿ.ಕೆ, ಪ್ರಬೋದ್ ಶೆಟ್ಟಿ ಮೇನಾಲ, ವಾಸುದೇವ ಪುತ್ತಿಲ, ವೆಂಕಟ್ರಮಣ ಮುಳ್ಯ, ಹೇಮಂತ್ ಕೆ.ಆರ್., ಶಿವರಾಮ ಕೇರ್ಪಳ, ಹರಿಣಾಕ್ಷಿ ಬೇಲ್ಯ, ನವ್ಯಾ ಚಂದ್ರಶೇಖರ, ಕೇಶವ ಸಿ.ಎ. ಹಾಗೂ ಶೀನಪ್ಪ ಬಯಂಬು, ಎ.ಎಸ್. ಮನ್ಮಥ, ಪಿ.ಕೆ.ಉಮೇಶ್, ಚಂದ್ರಶೇಖರ ಐ.ಬಿ., ಸೋಮನಾಥ ಪೂಜಾರಿ, ಕುಸುಮಾಧರ ಎ.ಟಿ., ಚನಿಯ ಕಲ್ತಡ್ಕ ಇದ್ದರು.

ಎನ್.ಎ. ಗೈರು : ಅಧ್ಯಕ್ಷ – ಉಪಾಧ್ಯಕ್ಷ ರ ಆಯ್ಕೆಗೆ ಬಿಜೆಪಿ ಹಿರಿಯ ನಾಯಕ, ಸಿ
ಎ. ಬ್ಯಾಂಕ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಎನ್.ಎ. ರಾಮಚಂದ್ರ ರು ಅಧ್ಯಕ್ಷ – ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಯಿಂದ ದೂರ ಉಳಿದರು.