ಅಡ್ಕಾರಿನಲ್ಲಿ ಕಾರು ಬೈಕ್ ಡಿಕ್ಕಿ : ಬೈಕ್ ಸವಾರರು ಜಖಂ

0


ಕಾರನ್ನು ಓವರ್‌ಟೇಕ್ ಮಾಡುವ ಸಂದರ್ಭದಲ್ಲಿ ಕಾರಿಗೆ ಡಿಕ್ಕಿ ಹೊಡೆದು ಬೈಕ್ ಸವಾರರಿಬ್ಬರು ಜಖಂಗೊಂಡ ಘಟನೆ ನಿನ್ನೆ ರಾತ್ರಿ ಅಡ್ಕಾರು ಬಳಿಯ ವಿನೋಬನಗರದಲ್ಲಿ ಸಂಭವಿಸಿದೆ.

ಮರ್ಕಂಜದ ಪ್ರಣಮ್ ಮತ್ತು ಪ್ರಸನ್ನ ಎಂಬವರು ಬೈಕಿನಲ್ಲಿ ಪುತ್ತೂರು ಕಡೆಯಿಂದ ಸುಳ್ಯಕ್ಕೆ ಬರುತ್ತಿದ್ದ ವೇಳೆ, ಮುಂಭಾಗದಲ್ಲಿ ಹೋಗುತ್ತಿದ್ದ ಕಾರನ್ನು ಓವರ್‌ಟೇಕ್ ಮಾಡುವ ಸಂದರ್ಭದಲ್ಲಿ ಡಿಕ್ಕಿ ಹೊಡೆಯಿತು. ಪರಿಣಾಮವಾಗಿ ಬೈಕ್ ಸವಾರರಿಗೆ ಗಾಯಗಳಾಯಿತು. ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತೆಂದು ತಿಳಿದು ಬಂದಿದೆ.