ಕೊಡಿಯಾಲಬೈಲಿನಲ್ಲಿ ರಾಮನಾಮ ಸ್ಮರಣೆ

0

ಸುಳ್ಯ ಬಳಿಯ ಉಬರಡ್ಕ ಕೊಡಿಯಾಲಬೈಲು ಒಂದನೇ ವಾರ್ಡಿನ ಹಿಂದೂ ಬಾಂಧವರಿಂದ ರಾಮನಾಮ ಸ್ಮರಣೆ ಮತ್ತು ಸಾಮೂಹಿಕ ಭಜನಾ ಕಾರ್ಯಕ್ರಮ ಜ.22 ರಂದು ಕೊಡಿಯಾಲಬೈಲಿನ ಗೌಡ ಸಮುದಾಯ ಭವನದಲ್ಲಿ ನಡೆಯಿತು.
ಬೆಳಿಗ್ಗೆ 9 ಗಂಟೆಗೆ ಆರಂಭವಾದ ಭಜನಾ ಕಾರ್ಯಕ್ರಮ ಮಧ್ಯಾಹ್ನ 130 ರ ವರೆಗೆ ಮುಂದುವರಿಯಿತು. ಮರ್ಕಂಜದ ಕೃಷಿಕ ಹಾಗೂ ರಾಮಭಕ್ತ ಶಂಕರನಾರಾಯಣ ಶಾಸ್ತ್ರಿ ದೋಳ ಇವರು ರಾಮಜನ್ಮಭೂಮಿ ವಿಚಾರವಾಗಿ ಭಾಷಣಗೈದರು. ವಿಜೇತ್ ಕಮಿಲಡ್ಕ ಕಾರ್ಯಕ್ರಮ ನಿರೂಪಿಸಿದರು. ಅಯೋಧ್ಯೆಯಲ್ಲಿ ನಡೆದ ಶ್ರೀರಾಮ ಲಲ್ಲಾನ ಮೂರ್ತಿ ಪ್ರಾಣಪ್ರತಿಷ್ಠೆಯ ಕಾರ್ಯದ ನೇರಪ್ರಸಾರವನ್ನು ಏರ್ಪಡಿಸಲಾಗಿತ್ತು.