ನಾರ್ಣಕಜೆ : ಕಾಣೆಯಾಗಿದ್ದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆ

0

ನೆಲ್ಲೂರು ಕೆಮ್ರಾಜೆ ಗ್ರಾಮದ ನಾರ್ಣಕಜೆ ಎಂಬಲ್ಲಿ‌ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಾರ್ಣಕಜೆ ನಿವಾಸಿ ಗುರುವ (65 ವರ್ಷ) ಎಂಬವರೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಗುರುವ ರವರು ಜ.27ರಂದು ಬೆಳಿಗ್ಗೆ ಪೈಲಾರಿನ ತನ್ನ ಕುಟುಂಬದ ಮನೆಯಲ್ಲಿ‌ ಅಷ್ಟಮಂಗಲ ಪ್ರಶ್ನೆಗೆಂದು ಹೋದವರು ಕಾಣೆಯಾಗಿದ್ದರು.‌

ಈ ಬಗ್ಗೆ ಮನೆಯವರು, ನೆರೆಹೊರೆಯ ಮನೆಯವರು ಹುಡುಕಾಡಿದ್ದರೂ ಪತ್ತೆಯಾಗಿರಲಿಲ್ಲ.‌ ಇಂದು ಧರ್ಮಸ್ಥಳಕ್ಕೆ ಹೋಗಿಯೂ ಹುಡುಕಾಡಿದ್ದರು.‌ ಗುರುವರವರು ಅವರ ಮನೆಯಿಂದ ಸ್ವಲ್ಪ ದೂರದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಇದೀಗ ಕಂಡುಬಂದಿದೆ‌.‌

ಆತ್ಮಹತ್ಯೆ ಗೆ ಕಾರಣ ತಿಳಿದು ಬಂದಿಲ್ಲ.‌

ಮೃತರು ಓರ್ವ ಪುತ್ರ, ಪುತ್ರಿ ಹಾಗೂ ಬಂಧುಗಳನ್ನು ಅಗಲಿದ್ದಾರೆ.