ಕಸಾಪ ತಾಲೂಕು ಘಟಕದ ಮಾಸಿಕ ಸಭೆ

0

ಹೋಬಳಿ ಘಟಕದ ನೂತನ ಅಧ್ಯಕ್ಷರುಗಳಿಗೆ ಗೌರವಾರ್ಪಣೆ- ಸನ್ಮಾನಿತರಿಗೆ ಅಭಿನಂದನೆ

ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತ್ ನ ಮಾಸಿಕ ಸಭೆಯು ಇಂದು ಸುಳ್ಯ ಕನ್ನಡಭವನ‌ದಲ್ಲಿ ನಡೆಯಿತು.


ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷ ಚಂದ್ರಶೇಖರ ಪೇರಾಲು ವಹಿಸಿದ್ದರು. ಸಭೆಯಲ್ಲಿ ಕಸಾಪ ಸುಳ್ಯ ಹೋಬಳಿ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಚಂದ್ರಾವತಿ ಬಡ್ಡಡ್ಕ, ಪಂಜ ಹೋಬಳಿ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಬಾಬು ಗೌಡ ಅಚ್ರಪ್ಪಾಡಿಯವರನ್ನು ಮತ್ತು ಸುಳ್ಯ ತಾಲೂಕು ಜಾನಪದ ಪರಿಷತ್ತಿನ ಅಧ್ಯಕ್ಷರಾದ ಜಯರಾಮ ಶೆಟ್ಟಿ ಕೆ.ಎನ್.ರವರನ್ನು ಹಾಗೂ ದ.ಕ.ಜಿಲ್ಲಾ ಕಸಾಪ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ನೇಮಕಗೊಂಡ ಹರೀಶ್ ಬಂಟ್ವಾಳ್ ರವರನ್ನು ಗೌರವಿಸಲಾಯಿತು.


ಕೆ.ವಿ.ಜಿ.ಸುಳ್ಯ ಹಬ್ಬದಲ್ಲಿ ಸನ್ಮಾನಗೊಂಡ ಹಾಗೂ ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾದ ತೇಜಸ್ವಿ ಕಡಪಳ ರವರನ್ನು ಅಭಿನಂದಿಸಲಾಯಿತು.


ಸಭೆಯಲ್ಲಿ ಸದಸ್ಯತ್ವ ಅಭಿಯಾನ, ಹೋಬಳಿ ಘಟಕಗಳ ಪದಗ್ರಹಣ, ಹಸ್ತಪ್ರತಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಕುರಿತು ಚರ್ಚಿಸಲಾಯಿತು. ಅನುದಾನವಿಲ್ಲದೆ ತಾಲೂಕು ಸಾಹಿತ್ಯ ಸಮ್ಮೇಳನ ನಡೆಸಲು ಸಾಧ್ಯವಾಗದ ಬಗ್ಗೆ ಚರ್ಚೆ ನಡೆಯಿತು.


ಗೌರವ ಕಾರ್ಯದರ್ಶಿ ಶ್ರೀಮತಿ ಚಂದ್ರಮತಿ,ಕೋಶಾಧಿಕಾರಿ ದಯಾನಂದ ಆಳ್ವ, ಜಿಲ್ಲಾ ಪ್ರತಿನಿಧಿ ರಾಮಚಂದ್ರ ಪಲ್ಲತ್ತಡ್ಕ, ಕಸಾಪ ನಿರ್ದೇಶಕರುಗಳಾದ ಸಂಜೀವ ಕುದ್ಪಾಜೆ, ಸಂಕೀರ್ಣ ಚೊಕ್ಕಾಡಿ, ರಮೇಶ್ ನೀರಬಿದಿರೆ, ಶರೀಫ್ ಜಟ್ಟಿಪಳ್ಳ, ಲತಾಶ್ರೀ ಸುಪ್ರೀತ್ ಮೋಂಟಡ್ಕ, ಶಶ್ಮಿ ಭಟ್ ಅಜ್ಜಾವರ ಉಪಸ್ಥಿತರಿದ್ದರು.