ಸ್ಕೂಲ್ ಬಸ್ ಚಾಲಕ ಮೋಹನ್ ಆಚಾರ್ಯ ಕೃಷ್ಣನಗರ -ಹೃದಯಾಘಾತದಿಂದ ನಿಧನ

0

ಪಂಜದ ಕೃಷ್ಣನಗರ ದಿ. ಶೇಷಪ್ಪ ಆಚಾರ್ಯ ಮತ್ತು ದಿ.ಸುಂದರಿ ರವರ ಪುತ್ರ ಮೋಹನ್ ಆಚಾರ್ಯ ರವರು ಹೃದಯಾಘಾತದಿಂದ ಫೆ.4 ರಂದು ನಿಧನರಾದರು. ಅವರಿಗೆ 58 ವರುಷ ವಯಸ್ಸಾಗಿತ್ತು.

ಅವರು ಬೆಳ್ಳಾರೆ ಜ್ಞಾನ ಗಂಗಾ ಸ್ಕೂಲ್ ಬಸ್ ಚಾಲಕರಾಗಿದ್ದರು. ಫೆ.4.ರಂದು ಮುಂಜಾನೆ ಸುಮಾರು 2 ಗಂಟೆ ವೇಳೆಗೆ ತೀವ್ರ ಅನಾರೋಗ್ಯ ಕಾಣಿಸಿ ಕೊಂಡು ಚಿಕಿತ್ಸೆಗೆ ಕಡಬದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.ಆದರೆ ಅಲ್ಲಿ ವೈದ್ಯರು ಪರೀಕ್ಷಿಸಿ ಅವರು ಮೃತಪಟ್ಟಿರುವುದಾಗಿ ತಿಳಿಸಿದರು ಎನ್ನಲಾಗಿದೆ.


ಮೃತರು ಪತ್ನಿ ಶ್ರೀಮತಿ ಜಯಂತಿ ,ಪುತ್ರಿ ಯಜ್ಞ ಶ್ರೀ, ಸಹೋದರಾದ ರಮೇಶ ಆಚಾರ್ಯ, ರಾಕೇಶ್ ಆಚಾರ್ಯ, ಸಹೋದರಿಯರಾದ ಶ್ರೀಮತಿ ಕೃಷ್ಣವೇಣಿ ಚಿನ್ನಯ್ಯ ಆಚಾರ್ಯ ಕಲ್ಲಾಜೆ, ಶ್ರೀಮತಿ ಗಿರಿಜಾ ಚಂದ್ರಶೇಖರ ಮಡಿಕೇರಿ ಹಾಗೂ ಕುಟುಂಬಸ್ಥರು, ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.