ಸುಬ್ರಹ್ಮಣ್ಯ: ಕುಲ್ಕುಂದದ ಯಜ್ಞೇಶ್ ಆಚಾರ್ ರ ದಾಸನಿವಾಸದಲ್ಲಿ ವೈಭವದ ಸಂಗೀತೋತ್ಸವ ಹಾಗೂ ಯಕ್ಷಗಾನೋತ್ಸವ

0

ದಾಸ ನಿವಾಸ ಕಲಾ ವೇದಿಕೆ ಮತ್ತು ಸ್ಥಳೀಯ ಕಲಾಸಕ್ತರ ಸಹಯೋಗದಲ್ಲಿ, ಶ್ರೀ ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನತೀರ್ಥ ಸ್ವಾಮಿಗಳು ಹಾಗೂ ಶ್ರೀ ಎಡನೀರು ಮಠ ಸಚ್ಚಿದಾನಂದ ಭಾರತೀತೀರ್ಥ ಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ಫೆ.5 ರಂದು ಸುಬ್ರಹ್ಮಣ್ಯದ ಯಜ್ಞೇಶ್ ಆಚಾರ್ ಅವರ ದಾಸನಿವಾಸ ಕುಲ್ಕುಂದದಲ್ಲಿ ಸಂಗೀತೋತ್ಸವ ಹಾಗೂ ಯಕ್ಷಗಾನೋತ್ಸವ ನಡೆಯಿತು.


ಸಂಜೆ ಕಲೈಮಾಮಣಿ ವಿದ್ವಾನ್ ಶಂಕರನ್ ನಂಬೂದರಿ ಬಳಗದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರೇಕ್ಷಕರ ಮನ ಗೆದ್ದಿತು.

ರಾತ್ರಿ ಶ್ರೀ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ ಮೆಕ್ಕೆಕಟ್ಟು ಶಿರಿಯಾರ ಅವರಿಂದ ಯಕ್ಷಗಾನ ಬಯಲಾಟ ಚಂದ್ರಾವಳಿ ವಿಲಾಸ ಮಾಗಧವಧೆ ನಡೆಯಿತು. ನೂರಾರು ಸಂಖ್ಯೆಯ ಪ್ರೇಕ್ಷಕರರು ಭಾಗವಹಿಸಿದ್ದರು.

(ಪೋಟೋ: ಶಾಂತಲ ಸ್ಟುಡಿಯೋ ಸುಬ್ರಹ್ಮಣ್ಯ)