ಸುಳ್ಯ : ಭಾರತ್ ಆಗ್ರೋ ಸರ್ವೀಸಸ್ ಆ್ಯಂಡ್ ಸಪ್ಲೈಸ್

0

ಆಗ್ರೋ ಸುವರ್ಣ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ಸುಳ್ಯದ ರಥಬೀದಿಯ ಶ್ರೀ ಚೆನ್ನಕೇಶವ ದೇವಸ್ಥಾನದ ಬಳಿಯಿರುವ ರೊ. ರಾಮಚಂದ್ರ ಪಿ. ಅವರ ಮಾಲಕತ್ವದ ಭಾರತ್ ಆಗ್ರೋ ಸರ್ವೀಸಸ್ ಆ್ಯಂಡ್ ಸಪ್ಲೈಸ್ ಸಂಸ್ಥೆಯು ಯಶಸ್ವಿ ಐವತ್ತು ಸಂವತ್ಸರಗಳನ್ನು ಪೂರೈಸಿ, ಸುವರ್ಣ ಸಂಭ್ರಮದಲ್ಲಿದ್ದು, ಆಗ್ರೋ ಸುವರ್ಣ ಸಂಭ್ರಮದ ಆಮಂತ್ರಣ ಪತ್ರಿಕೆಯನ್ನು ಕೃಪಾಶಂಕರ ತುದಿಯಡ್ಕ ಅವರು ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಫೆ.10ರಂದು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರಾದ ರೊ. ರಾಮಚಂದ್ರ ಪಿ., ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ರೊ. ಆನಂದ ಖಂಡಿಗ, ರೊ. ಪ್ರಭಾಕರನ್ ನಾಯರ್, ರೊ. ಶ್ರೀನಿವಾಸ್ ಕೆ., ರೊ. ದಳ ಸುಬ್ರಾಯ ಭಟ್ , ಶ್ರೀಮತಿ ಲತಾ ಮಧುಸೂದನ್ ಹಾಗೂ ಸಂಸ್ಥೆಯ ನೌಕರರು ಉಪಸ್ಥಿತರಿದ್ದರು.

ಆಗ್ರೋ ಸುವರ್ಣ ಸಂಭ್ರಮವು ಮಾ.7ರಂದು ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಜರುಗಲಿದ್ದು ಆಗ್ರೋ ಕೃಷಿ ಚಿಂತನ, ಆಗ್ರೋ ಗೌರವ ಸನ್ಮಾನ, ಆಗ್ರೋ ಸಾಂಸ್ಕೃತಿಕ ಸಂಜೆ ಜರುಗಲಿದ್ದು ಕಾರ್ಯಕ್ರಮವನ್ನು ಶಾಸಕಿ ಭಾಗೀರಥಿ ಮುರುಳ್ಯ ಅವರು ಉದ್ಘಾಟಿಸಲಿದ್ದಾರೆ.